ಗುರುವಾರ, ಫೆಬ್ರವರಿ 16, 2012

ಪುಟ್ಟನ LOVE ಸ್ಟೋರಿ


                                                      ಪುಟ್ಟನ LOVE ಸ್ಟೋರಿ 

ಅಂತು ಇಂತೂ ವಿಶ್ವಾಮಿತ್ರನ ತರ ಇದ್ದ ನಮ್ಮ ಪುಟ್ಟ ಅಲಿಯಾಸ್ ಪುಟ್ಟರಾಜನಿಗೆ ಮೊಟ್ಟ ಮೊದಲ ಬಾರಿಗೆ  ಒಬ್ಬ ಹುಡುಗಿಯ ಮೇಲೆ ನಿಜವಾದ ಲವ್ ಆಗಿಯೇ ಬಿಟ್ಟಿತ್ತು. ಅವಳ ಬಗ್ಗೆ ತಲೆಯನ್ನು  ಕೆಡಿಸಿಕೊಂಡ, ಹೆಚ್ಚು ಹೆಚ್ಚು  ಪ್ರೀತಿಯ ಹುಚ್ಚು ಅವನ ನೆತ್ತಿಗೆ ಏರಿಯೂ ಬಿಟ್ಟಿತ್ತು. " ಮದುವೆ ಅಂತ ಆದ್ರೆ ಅದು ಅವಳನ್ನೇ "  ಅನ್ನುವಷ್ಟು ಅಗಾಧವಾಗಿ ಬೆಳೆದು ಬಿಟ್ಟಿತು ಅವನ ಆ ಪ್ರೀತಿ. ಈ ಪ್ರೀತಿ ಅಂದ್ರೆ  "ಮದುವೆಯ ತನಕ ಮಾತ್ರ ಮಾಡುವುದಷ್ಟೇ" ಅಂತ ತಿಳಿಯುವ ಈ ಕಾಲದಲ್ಲಿ , ಪ್ರೀತಿ ಅಂದರೆ "ಸುಮ್ಮನೆ ಹಾಗೆ ಆಯಿತು ಈಗ ಹೋಯಿತು" ಅನ್ನೋ ಜನರ ನಡುವೆ , "ಅವಳನ್ನೇ ಮದುವೆ ಆಗಬೇಕು " ಅನ್ನೋ ಮಟ್ಟಿಗೆ  ಪ್ರೀತಿಸಿದ್ದ  ಪುಟ್ಟನಿಗೆ , ಅವನ ಸ್ನೇಹಿತರು " ಶಿಷ್ಯ ಬೇಡ ಕಣೋ ಇದೆಲ್ಲ , ಪ್ರೀತಿಸಿ ಮದುವೆ ಆಗುವುದೆಂದರೆ ಏನು ಸುಲಭದ ಮಾತಲ್ಲ , ಅದು ಅನ್ಯ ಜಾತಿಯ ಹೆಣ್ಣು ಮಗಳನ್ನ ಅಂದರೆ ಇನ್ನೂ ಕಷ್ಟ , ಯಾಕೋ ಬೇಕು ಇದೆಲ್ಲ ತಲೆ ನೋವು , ಬಿಟ್ಟು ಬಿಡೋ, ಸುಮ್ಮನೇ ಮನೆಯವರು ತೋರಿಸಿದ ಹುಡುಗಿಯನ್ನ ಮದುವೆ ಮಾಡಿಕೊಂಡು, ರಾಜಾರೋಷವಾಗಿ ಮಾವನ ಮನೆಯಲ್ಲಿ ಅಳಿಯೂಟ  ಹೋಡ್ಕೊಂಡು ಇದ್ದು ಬಿಡೋ" ಅಂತೆಲ್ಲಾ ಪರಿ ಪರಿಯಾಗಿ ಹೇಳಿದ್ರೂ , ಅವಳನ್ನು ಪ್ರೀತಿಸುವ, ಅವಳನ್ನೇ ಮದುವೆ ಆಗುವ ಅವನ ನಿರ್ಧಾರ ಅಚಲವಾಗಿಯೇ ಇತ್ತು.

     ಪುಟ್ಟ ಪ್ರೀತಿಸಿದ ಹುಡುಗಿಯ ಹೆಸರು ಸ್ನೇಹಲತ, ಎಲ್ಲರೊಂದಿಗೆ  ಬೇಗ ಬೆರೆಯುತ್ತಿದ್ದ ಹುಡುಗಿ. ಸ್ವಲ್ಪ ಬೇಗನೆ ಸ್ನೇಹಿತರನ್ನು  ತುಂಬಾ ಹಚ್ಚಿಕೊಳ್ಳುವ ಸ್ವಭಾವ ಅವಳದು. ಹಾಗೆಯೇ ಇವನೊಂದಿಗು ಸ್ನೇಹ ಶುರುವಾಗಿ ಸುಮಾರು ೪-೫ ತಿಂಗಳು ಆಗಿದ್ದವು. ಚೆನ್ನಾಗಿ ಮಾತನಾಡಿಕೊಂಡು ಇದ್ದರು ಪುಟ್ಟ ಮತ್ತು ಸ್ನೇಹ. ಅದೇನೋ ಇನ್ನು ಗೊತ್ತಿಲ್ಲ, ಅನೇಕ ದಿನಗಳು ಜೊತೆಗೆ ಕಳೆದಿದ್ದರು ಪುಟ್ಟನ ಮನಸ್ಸಿನಲ್ಲಿ ಇಷ್ಟೆಲ್ಲಾ ಅವಳ ಬಗ್ಗೆ ಪ್ರೀತಿ ಇದ್ದರು ,ಏನೆಲ್ಲಾ ಅವನು ಅಂದುಕೊಂಡಿದ್ರು , ಅವಳಿಗೆ ಇನ್ನು ಪುಟ್ಟ ಏನು ಹೇಳಿರಲಿಲ್ಲ. ಅವಳು ಹಾಗೆಯೇ ಇದ್ದಳು. ಅವರಿಬ್ಬರ ನಡುವೆ ಏನು ಇಲ್ಲವೆಂಬಂತೆ ಅವರು ವರ್ತಿಸುತ್ತಿದ್ದರು, ಆದರೂ  ಅವರ  ಕಣ್ಣುಗಳು ಒಮ್ಮೊಮ್ಮೆ ನಿಜ ಹೇಳುತ್ತಾ ಇದ್ದವು. ಗೊತ್ತಾದರೂ ಏನು ಅರ್ಥವಾಗಿಲ್ಲವೇನೋ ಅನ್ನೋ ರೀತಿ ವರ್ತಿಸುತ್ತಿದ್ದಳು  ಸ್ನೇಹ. ಈಗಲೂ ಅವನನ್ನು ಸ್ನೇಹದಿಂದಲೇ ನೋಡುತ್ತಿದ್ದಾಳೆ. ಅವನು ಕೂಡ ಹಾಗೆಯೇ,  ಎಂದು ತಾನಾಗಿಯೇ ಬಾಯಿ ಬಿಟ್ಟು "ನಾನು ನಿನ್ನ ಇಷ್ಟ ಪಡ್ತೀನಿ , ಪ್ರೀತಿಸ್ತೀನಿ , ನೀ ಇಲ್ಲದೆ ನನ್ನ ಜೀವನವೇ ಇಲ್ಲ , ನನ್ನ ಪ್ರೀತಿ ಹಾಗೆ ನನ್ನ ಪ್ರೀತಿ ಹೀಗೆ " ಎಂದು ಯಾವಾಗಲು ಹೇಳದೆ ಇದ್ರೂ ತನ್ನ ಬಗೆಗೆ ಅವನಲ್ಲಿ ಇದ್ದ ಆ ಸುಮಧುರ ಭಾವನೆಗಳು ಅವಳ ಮನಸ್ಸಿಗೆ ಮೊದಲಿನಿಂದಲೂ  ಅರ್ಥ ಆಗಿದ್ದವು. ಅವನು ಮನಸೋ ಇಚ್ಛೆ ಅವಳನ್ನು ಪ್ರೀತಿಸುವ ವಿಷಯವನ್ನು ಬಹು ದಿನಗಳ ಹಿಂದೆಯೇ ಅರಿತಿದ್ದಳು. ಸಹಜವಾಗಿ ಎಲ್ಲ ಹುಡುಗಿಯರ ತರ ಅದನ್ನು ತೋರಪಡಿಸದೆ, ಅವನ ಬಾಯಿಯಿಂದಲೇ ಆ ವಿಷಯವನ್ನು ಕೇಳಬೇಕೆಂದು ಅವಳು ಸುಮ್ಮನಿದ್ದಳು.

            ಬಹಳಷ್ಟು ಧೈರ್ಯ ಮಾಡಿ, ಒಂದು ದಿನ ಪುಟ್ಟ ಸ್ನೇಹಾಳ ಮೊಬೈಲ್ ಗೆ ಒಂದು ಸಂದೇಶ ಕಳಿಸಿ  ನಗರದ ಪೂರ್ವಕ್ಕಿರುವ  ರಾಗಿಗುಡ್ಡಕ್ಕೆ ಅವಳನ್ನು ಬರಹೇಳಿ,ಅವಳಿಗಾಗಿ ತಾನು ಕಾಯುವುದಾಗಿ ಸಂದೇಶವನ್ನು ಟೈಪ್ ಮಾಡಿ ಕಳಿಸಿದ.ಅವಳ ಉತ್ತರ ಏನು ಅಂತ ಬರುತ್ತೋ , ಅದು ಹೇಗೆ ಇರುತ್ತೋ ಅಂತ ಯೋಚಿಸುತ್ತ ಕಾಯ ತೊಡಗಿದ, ಸಂದೇಶ ಕಳುಹಿಸಿ ಎರಡೇ ನಿಮಿಷದಲ್ಲಿ ಬೆವರಿದ, ನಾಚಿದ. ಅಷ್ಟೊತ್ತಿಗೆ ಅವಳ ಉತ್ತರವೂ ಬಂತು " ಸರಿ ಯಾವಾಗ ಸಿಗುವುದು ?  ಯಾಕೆ ಈ ಬೇಟಿ  ?  ಅದು ಅಲ್ಲಿ ರಾಗಿ ಗುಡ್ಡದಲ್ಲಿ ,  ಅಂತ ಕೇಳಿದ್ದಳು " . " ನೀ ಅಲ್ಲಿಗೆ ಬಾ, ನಿನಗೆ ಎಲ್ಲಾ ಅರ್ಥ ಆಗುತ್ತೆ ಅಂತ ಹೇಳಿ " ಬಂದಿದ್ದ ಎರೆಡು  ಬೆವರು ಹನಿಗಳನ್ನು ಪುಟ್ಟ ಒರೆಸಿಕೊಂಡು , "ಇಲ್ಲೇ ಹೀಗೆ  ಹೆದರಿಕೆ ಆಗ್ತಿದೆ, ಇನ್ನು ಅವಳೆದಿರು ಈ ವಿಷಯ ತಿಳಿಸಬೇಕಾದರೆ ಇನ್ನು ಹೇಗೋ" ಅನ್ನುವ ಭಯ ಕೂಡ ಶುರುವಾಗಿ , ಮೈಯಲ್ಲಿ ಒಂದು ರೀತಿಯ ಹಿತವಾದ ನಡುಕ ಪ್ರಾರಂಭವಾಗಿತ್ತು.

          ಹೇಳಿದ ಸಮಯಕ್ಕೂ ಮೊದಲೇ ರಾಗಿ ಗುಡ್ಡಕ್ಕೆ ಬಂದಿದ್ದ  ಸ್ನೇಹ ತೋರಿಸಿಕೊಳ್ಳದಿದ್ದರು ಅವಳ ಮುಖದಲ್ಲೊಂದು ಮುಗ್ದ ನಗುವಿತ್ತು, ನಾಚಿಕೆಯಿತ್ತು ಹಾಗೆ ಏನೋ ಒಂದು ತರಹದ ಮಧುರ ಭಾವನೆಯೂ ಇತ್ತು. ಪುಟ್ಟನ ಮನಸ್ಸಿನಲ್ಲೂ ಏನೆಲ್ಲಾ ಭಾವನೆಗಳು ಇದ್ದರು , ತನ್ನ ಪ್ರೀತಿಯನ್ನು ವ್ಯಕ್ತಪಡಿಸುವ ಭಯವು ಅವನಲ್ಲಿದ್ದ ಎಲ್ಲ ಭಾವನೆಗಳನ್ನು ಮುಚ್ಚಿಹಾಕಿತ್ತು.

           ಗುಡ್ಡದ ಹನುಮ ದೇವರ ದೇವಸ್ತಾನದ ಹಿಂದಿನ  ಬಂಡೆಯ ಮೇಲೆ ಕೂತಿದ್ದರು, ಇಬ್ಬರು ದಿಟ್ಟಿಸಿ ಏನನ್ನೋ ನೋಡುತ್ತಾ ಇದ್ದರು , ಏನನ್ನೋ ಯೋಚಿಸುತ್ತ ಇದ್ದರು. ಯಾರು ಮಾತನ್ನು ಶುರು ಮಾಡಲಿಲ್ಲ. ಕೊನೆಗೆ ಪುಟ್ಟ  ಪಕ್ಕದಲ್ಲಿ ಕುಳಿತಿದ್ದ ಅವಳ ಮುಖ ನೋಡಿ "ಈ ದಿನ ನೀ ತುಂಬಾ ಚೆನ್ನಾಗಿ ಕಾಣುಸ್ತ  ಇದ್ದೀಯ" ಅಂದು ಸುಮ್ಮನಾದ. ಅವಳ ಮುಖ ಕೆಂಪೇರಿತು, ಮತ್ತೆ ಅವನ ಮಾತಿಗೆ ಕಾಯ ತೊಡಗಿದಳು . 2  ನಿಮಿಷ ಯಾರು ಮತ್ತೆ ಮಾತಾಡಲಿಲ್ಲ. ಮತ್ತೆ ದೈರ್ಯ ಮಾಡಿ ಅವಳೇ "ಏನೋ ಹೇಳ್ಬೇಕು ಅಂತ ನೀನು ಹೇಳಿದೆ , ಅದೇನು ಅಂತ ಈಗ ಹೇಳು " ಎಂದಳು. ಪುಟ್ಟ ತಡವರಿಸ ತೊಡಗಿದ."ಒಂದು ವೇಳೆ ನಾ ಇಲ್ಲಿಗೆ ಬರದಿದ್ದರೆ ನೀ ಏನು ಮಾಡಿರುತ್ತಿದ್ದೆ ?? " ಎಂದು ಸ್ನೇಹ ಪುಟ್ಟನನ್ನು ಕೇಳಿದಾಗ,  ಪುಟ್ಟ " ಹಾಗೆ ಕಾದುಕೊಂಡು ಕೂತಿರುತ್ತ ಇದ್ದೆ " ಅದಕ್ಕೆ ಸ್ನೇಹ " ಎಷ್ಟೊತ್ತು  ಕಾದಿರುತ್ತಿದ್ದೆ ??? " ಎಂದಾಗ ದೈರ್ಯ ಮಾಡಿ " ಒಂದು ದಿನ , ಎರೆಡು ದಿನ , ತಿಂಗಳು, ವರ್ಷ , ನಾ ಸಾಯೋತನಕ  ನಿನಗಾಗಿ ಕಾದಿರುತ್ತ ಇದ್ದೆ"  ಅಂತ ಅವಳ ಕಡೆ ತಿರುಗಿ ಹೇಳಿದ. ಅವಳ ಮುಖವನ್ನು ನೇರವಾಗಿ ದಿಟ್ಟಿಸಿ ನೋಡುವ ಶಕ್ತಿ ಆಗಲೇ ಅವನಲ್ಲಿ ಭಯಕ್ಕೆ ಕುಗ್ಗಿ ಹೋಗಿತ್ತು. ಅವಳು ಏನು ಅಂದುಕೊಳ್ಳುವಳೋ ಅನ್ನುವ ಭಯ ಪುಟ್ಟನಿಗೆ ಶುರುವಾಗಿತ್ತು. ಅವನ ಮನಸ್ಸಿನಲ್ಲಿ ಏನಿದೆ , ಪುಟ್ಟ ಈಗ ಏನು ಹೇಳ ಬಯಸುತ್ತಿದ್ದಾನೆ ಎಂದು ಮೊದಲೇ ತಿಳಿದಿದ್ದ ಅವಳು ನಿಧಾನವಾಗಿ ಅವಳ ಪಕ್ಕದಲ್ಲೇ ಇದ್ದ  ಅವನ  ಬಲಗೈ  ಮೇಲೆ ತನ್ನ ಎಡಗೈ ಇಟ್ಟಳು. ಅವಳ ಆ ಸ್ಪರ್ಶ ಪುಟ್ಟನಿಗೆ ಸಹಿಸಲಾರದ ಮುದ ನೀಡಿತು. " ಅದೇನು ಹೇಳು ಪುಟ್ಟ, ಯಾಕೆ ಹೀಗಿದಿಯಾ , ಏನ್ ಆಗ್ತಿದೆ ನಿನಗೆ ? " ಎಂದಾಕ್ಷಣ, ಅವಳ ಕೈಯನ್ನು  ತನ್ನ ಎರೆಡು ಕೈಗಳಿಂದ ಬಿಗಿಯಾಗಿ ಹಿಡಿದು " ನಿಜವಾಗಿಯೂ , ನಿನಗೆ ನನ್ನ ಮನಸ್ಸಿನಲ್ಲಿ ಏನಿದೆ  ಅಂತ ನಿಂಗೆ ಅರ್ಥ ಆಗಿಲ್ಲವೇ ಸ್ನೇಹ ?? " ಎಂದನು.  ಅವಳು ತುಂಬಾ ಭಾವುಕಳಾದಳು, ಗೊತ್ತಿಲ್ಲದೇ ಅವಳ ಕೈಗಳು ಅವನ ಕೈಗಳನ್ನು ಗಟ್ಟಿಯಾಗಿ ಇಡಿದಿದ್ದವು. ಇಬ್ಬರು ಒಂದು ಕ್ಷಣ ತಾವು ಏನು ಮಾಡ್ತಾ ಇದೀವಿ,ಯಾವ್ ಮಾತ್ ಆಡ್ತಾ ಇದೀವಿ ಅನ್ನೋದನ್ನೇ ಮರೆತು ಒಬ್ಬರೊನ್ನೊಬ್ಬರು ನೋಡತೊಡಗಿದರು. ಇಬ್ಬರು ದೂರ ದೂರ ಕೂತಿದ್ದರು ಸಹ ತುಂಬಾ ಹತ್ತಿರವಾಗಿದ್ದರು. ಅವರಿಬ್ಬರ ಎಲ್ಲ ಭಾವನೆಗಳು  ಬೆರೆತಿದ್ದವು. ಪ್ರೀತಿಯಲ್ಲಿ ಯಾವುದೋ ಲೋಕಕ್ಕೆ ಹೋಗಿ ಎಲ್ಲವನ್ನು ಮರೆತರು, ಗಂಟೆ ಕಳೆಯಿತು, ಸೂರ್ಯ ಕಣ್ಣಿಗೆ ಕಾಣಿಸದಾದ, ಇಳಿ  ಸಂಜೆಯ ಸಮಯವಾದ್ದರಿಂದ ಅವಳು ಮನೆಗೆ ಹೊರಟಳು. ಗುಡ್ಡದ ಹನುಮನಿಗೆ ಇಬ್ಬರು ವಂದಿಸಿ, ಅಲ್ಲಿಂದ ಮನೆಗೆ ಹೊರಟರು. ಅಲ್ಲಿಯವರೆಗೂ ಯಾವುದೋ ಭ್ರಮೆಯೋ , ಸ್ವಪ್ನ ಲೋಕದಲ್ಲೋ , ಕಲ್ಪನೆಯ ಲೋಕದಲ್ಲೋ ಇದ್ದ ಸ್ನೇಹಳು    ಮನೆಗೆ ಹೋಗುವ ಹಾದಿಯಲ್ಲಿ  ವಾಸ್ತವಕ್ಕೆ ಬಂದಳು. ಒಂದು ಕಡೆ ಅವಳಪ್ಪ, ಅಮ್ಮ ಮತ್ತು ಪ್ರೀತಿಯ ತಂಗಿ. ಇನ್ನೊಂದು ಕಡೆ ಪುಟ್ಟರಾಜು. ಪುಟ್ಟನ ನಿಷ್ಕಲ್ಮಶ ಮತ್ತು ಪ್ರಾಮಾಣಿಕ ಪ್ರೀತಿಯನ್ನು ತಿರಸ್ಕರಿಸಲು ಸಾದ್ಯವಿಲ್ಲದ ಅವಳ  ಮನಸ್ಥಿತಿ. ಪ್ರೀತಿಸಿ ಮದುವೆಯಾದರೆ ಆಗುವ ಸಮಸ್ಯಗಳು, ಅಪ್ಪ ಅಮ್ಮನಿಗೆ ಆಗುವ ಸಂಕಟ, ತಂಗಿಯ ಮದುವೆಯ ಮೇಲೆ ಆಗಬಹುದಾದ ಪರಿಣಾಮ. ನಾ ಏನಾದರು ಪುಟ್ಟನನ್ನು ಪ್ರೀತಿಸಿದರೆ ಏನೆಲ್ಲಾ ಆಗಬಹುದು ಎನ್ನುವ ಘಟನೆಗಳ ಸಣ್ಣ ಚಿತ್ರಣ  ಆ ಕ್ಷಣಕ್ಕೆ ಅವಳ ಕಣ್ಣುಗಳ ಮುಂದೆ ಬಂದಿತು. ಯಾವುದು ಸರಿ, ಯಾವುದು ತಪ್ಪು. ಏನೇನೋ ಯೋಚನೆಗಳು ಬಂದರು ಪುಟ್ಟ ಮತ್ತು ಪುಟ್ಟನ ಪ್ರೀತಿ ನೆನೆಸಿಕೊಂಡ ತಕ್ಷಣ ಎಲ್ಲವನ್ನು  ಮರೆತಳು. ಅವನಿಗಾಗಿ ಅವಳು ತನ್ನ ಪ್ರೀತಿಯನ್ನು ಅರ್ಪಿಸಿದಳು. ಅವನ ಅಗಾಧವಾದ ಆ ಪ್ರೀತಿಗೆ ಸಹಜವಾಗಿಯೇ ಸ್ಪಂದಿಸ ತೊಡಗಿದಳು.  ಹೀಗೆ  ಕಾಲವು  ಸರಿದು ಹೋಯಿತು.      
      

          ಒಂದು ದಿನ ತಮ್ಮ  ಮದುವೆಯ ವಿಚಾರವನ್ನು ಅವನು ತನ್ನ ಪ್ರೇಯಸಿ ಸ್ನೇಹಳಿಗೆ  ತಿಳಿಸಿದ. ಅವಳು ಅದಕ್ಕೆ "ಪ್ರೀತಿಯನ್ನು ಬೇಕು ಬೇಕಂತಲೇ ತ್ಯಾಗ ಮಾಡಿ , ಪ್ರೀತಿ ಮಧುರ ತ್ಯಾಗ ಅಮರ ಅನ್ನೋ  ಹುಡುಗರು ಈ ಕಾಲದಲ್ಲಿ ಇರುವಾಗ ಪುಟ್ಟರಾಜು ನನ್ನನ್ನು ಮದುವೆ ಆಗೋ ಮಟ್ಟಿಗೆ ಇಷ್ಟ ಪಡ್ತಾನೆ , ಪ್ರೀತಿಸಿದ ಹುಡುಗಿಗೆ ಬೇರೊಬ್ಬ ಹುಡುಗ ಬಂದು ಬಾಳು ಕೊಡುವ ಅವಕಾಶವನ್ನು ಬೇಕಾಂತಲೇ ಸೃಷ್ಟಿಸುವ ಹುಡುಗರ ಮಧ್ಯೆಯೂ , ಅವನೆ  ಮದುವೆ ಆಗ್ತೀನಿ ಅನ್ನುತ್ತಾ ಇರುವಾಗ ನಾನು ಹೇಗೆ ಅವನನ್ನು ತಿರಸ್ಕರಿಸಲಿ" ಅಂತ ಮನಸ್ಸಿನಲ್ಲೇ ಯೋಚಿಸಿ, ಹಿಂದು ಮುಂದು ನೋಡದೆ ಅವಳು ಮಧುವೆಗೆ ಸಮ್ಮತಿ ನೀಡಿದಳು. ಯುದ್ದದ ಮೊದಲ ಹಂತವನ್ನ ಗೆದ್ದವನಂತೆ ಪುಟ್ಟನು ಬೀಗುವಾಗ ಅವಳು ಮುಂದಿನ ಹಂತದ ಬಗ್ಗೆ, ಮುಂದಿನ ನಡೆಯ ಬಗ್ಗೆ ಬಿಡಿಸಿ ಹೇಳಿ, "ನಿಮ್ಮ ಮತ್ತೆ ನಮ್ಮ ಅಪ್ಪ ಅಮ್ಮನನ್ನು ಮೊದಲು ಒಪ್ಪಿಸಿ ಆಮೇಲೆ ನಮ್ಮ ಮದುವೆ" ಎಂದಳು. ಅದಕ್ಕೆ ಏನೋ ಒಂದು ವಿಶ್ವಾಸದಿಂದ  " ಎಲ್ಲರನ್ನು  ಒಪ್ಪಿಸಿಯೇ  ಒಪ್ಪಿಸುತ್ತೇನೆ , ಒಪ್ಪಿಸಿಯೇ ಮಧುವೆ  ಆಗೋಣ " ಅಂತ ಹೇಳಿದ. 

             ಸ್ನೇಹಳ ತಂದೆ ಸಕತ್ ಘಾಟಿ ಮನುಷ್ಯ, ವಯಸ್ಸಾದರೂ ಗಟ್ಟಿತನ ಮಾತ್ರ ಕಡಿಮೆ ಆಗಿಲ್ಲ. ಅವಳಿಗೂ ಅವರಪ್ಪ ಅಮ್ಮನನ್ನು ಒಪ್ಪಿಸದೇ ಮಧುವೆ ಆಗುವ ಮನಸ್ಸಿಲ್ಲ. ಒಂದು ಹೆಣ್ಣಾಗಿ ಈ ವಿಷಯವನ್ನು ತಾನಾಗಿಯೇ  ನಾಚಿಕೆ ಬಿಟ್ಟು ಪ್ರೀತಿಯ ವಿಷಯ ಹೇಳುವುದು ಕಷ್ಟದ ವಿಷಯವು ಹೌದು, ಅದೇ ರೀತಿ ಸ್ನೇಹಾಳಿಗು ಕೂಡ ತನ್ನ ಪ್ರೇಮದ ವಿಚಾರವನ್ನು ತನ್ನ ತಂದೆ ತಾಯಿಗಳ ಮುಂದೆ ತಾನೇ ಬಾಯಿ  ಬಿಟ್ಟು ಹೇಳಲು ಭಯದ ಜೊತೆಗೆ ನಾಚಿಕೆಯು ಇತ್ತು. ಅದಕ್ಕೆ ಸ್ನೇಹ ಈ ಒಪ್ಪಿಸುವ  ಜವಾಬ್ದಾರಿಯನ್ನು ಪ್ರಿಯತಮ ಬುದ್ದಿವಂತ ಪುಟ್ಟರಾಜುಗೆ ಬಿಟ್ಟಿದ್ದಳು. ಪುಟ್ಟನು ಕೂಡ ಅದಕ್ಕೆ ರೆಡೀ ಆಗಿ ಅವರ ಅಪ್ಪ ಅಮ್ಮರನ್ನು ಒಪ್ಪಿಸುವ ತಯ್ಯಾರಿ ಕೂಡ ಮಾಡಿದ. ಸ್ನೇಹಳ ಅಪ್ಪ ಪಕ್ಕಾ ಸಂಪ್ರದಾಯವಾದಿ, ಚಿಂತಕ, ಬಸವ ತತ್ವ ಪ್ರತಿಪಾದಕರೆಂದು ಅವನು ಮೊದಲೇ ಸೂಕ್ಷ್ಮವಾಗಿ ಅರಿತಿದ್ದ,  ಇವರಿಬ್ಬರ  ಜಾತಿಗಳು ಒಂದು ತರಹ  ಎಣ್ಣೆ ಶೀಗೆಕಾಯಿ ತರ ಆಗಿವೆ ಈಗಿನ ಜಾತಿವಾದಿಗಳಿಗೆ ಕೈಗೆ ಸಿಕ್ಕು. ಒಬ್ಬರು ಶೈವರಾದರೆ ಮತ್ತೊಬ್ಬರು ವೈಷ್ಣವರು. ವೈಷ್ಣವನಾದ ಪುಟ್ಟನಿಗೆ ಪ್ರತೀತಿಯಂತೆ ವಿದ್ಯಬ್ಯಾಸವೇ ಆಸ್ತಿ , ಮಾತೆ ಬಂಡವಾಳ, ಬುದ್ದಿವಂತಿಕೆಯೇ ಅಂತಸ್ತು. ಊರಿನಲ್ಲಿರುವ ಒಂದು ಹಳೆಯ ಮನೆ ಬಿಟ್ಟರೆ ಈ ಪೇಟೆಯಲ್ಲಿ ಅವನಿರುವುದು ಒಂದು ಹುಡುಗರ PG ಅಲ್ಲಿ. ಆಸ್ತಿ ಇಲ್ಲದ ಅವನಿಗೆ  ಸ್ನೇಹಾಳ ಅಪ್ಪ, ಅಮ್ಮನನ್ನು ಒಲಿಸಿಕೊಳ್ಳ ಬೇಕೆಂದರೆ ಅದು ತನ್ನ ಬುದ್ದಿವಂತಿಕೆಯಿಂದಲೇ ಎಂದು ಚೆನ್ನಾಗಿಯೇ ಅರಿತು ಅದಕ್ಕೆ ತಕ್ಕಷ್ಟು ತಯಾರಿ ಕೂಡ ಮಾಡಿದ್ದ.ಸ್ನೇಹಾಳ ತಂದೆ ಶಿವಪ್ಪನವರು ಬಸವ ತತ್ವ ಪ್ರತಿಪಾದಕರಾಗಿದ್ದರಿಂದ ಅವನಿಗೆ ಎಲ್ಲೋ ಒಂದು ಕಡೆ ನಮ್ಮ ಮಧುವೆಗೆ ಈ ಜಾತಿಯ ವಿಷಯ ಅಡ್ಡ ಬರುವುದಿಲ್ಲ ಅಂತ ಅಂದುಕೊಂಡಿದ್ದ . 
      
          ಇತ್ತೀಚಿನ ಹುಡುಗಾರದ ನಾವು ದೊಡ್ಡವರ ಆದರ್ಶಗಳನ್ನು ನಮ್ಮ ನಮ್ಮ  ಕೆಲಸಕ್ಕೆ ಮತ್ತು ನಡವಳಿಕೆಗೆ ಪೂರಕವಾಗಿ, ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ  ಅರ್ಥೈಸಿಕೊಳ್ಳುತ್ತೇವೆ ಎಂಬುದು ಅಕ್ಷರಶ: ಸತ್ಯ. ಹೇಗೆ ಕುಡುಕನಿಗೆ ಕುಡಿಯಬೇಡ ಅಂದರೆ ಕುಡಿಯುವುದರಿಂದ ದೇಹಕ್ಕೆ ಒಳ್ಳೇದು ಅದನ್ನ doctors ಕೂಡ ಹೇಳ್ತಾರೆ ಅನ್ನೋದು, ಪ್ರೇಮ ವಿವಾಹದ ವಿಷಯ  ಬಂದಾಗ ಮಾತ್ರ  ಜಾತಿ ಪದ್ದತಿಯನ್ನು ವಿರೋದಿಸುವ ಆದರ್ಶಗಳನ್ನು ಎತ್ತಿ ಹಿಡಿಯುವುದು ಹಾಗೆ ಪುಟ್ಟನು ಕೂಡ ಈಗ ಜಾತಿ ಪದ್ದತಿಯ ಪಕ್ಕ ವಿರೋದಿಯಾಗಿದ್ದಾನೆ. ಪಕ್ಕ  ವಿಶ್ವಮಾನವ ಸಂದೇಶ ಸಾರಲು ಸಿದ್ದನಾಗಿದ್ದಾನೆ. ಅದಕ್ಕೆ ಪೂರಕವಾದ ಭಾಷಣವನ್ನು ಸ್ನೇಹಾಳ ತಂದೆ ಮುಂದೆ ಒಪ್ಪಿಸಲು ರೆಡಿ  ಆಗಿದ್ದಾನೆ.    
         
              ಸ್ನೇಹಾಳ ಮನೆಗೆ ಬಂದ ಕದ ತಟ್ಟಿಯೇ ಬಿಟ್ಟ , ಮೊದಲ ಭಾರಿಗೆ ಯಾರು ಕದ ತೆರೆಯಲಿಲ್ಲ, ಸ್ನೇಹ ಅಂತ ಹೆಸರಿಡಿದು ಕೂಗುವುದಕ್ಕೆ ಮುಜುಗರವಾಗಿ , " ಅಂಕಲ್  ಅಂಕಲ್ " ಅಂತ ಕೂಗಿ ಮತ್ತೆ ಅಲ್ಲೇ ಇದ್ದ calling ಬೆಲ್ ಕೂಡ ಒತ್ತಿದ . ತಕ್ಷಣ ಒಳಗಿನಿಂದ ಯಾರೋ ಕದ ತೆರೆಯುವ ಸದ್ದಾಯಿತು, ತಕ್ಷಣಕ್ಕೆ  ಅವನಿಗೆ ಒಂದು ತರಹದ ಮಿಂಚು ಮೈಯಲ್ಲಿ ಸಂಚರಿಸಿದಂತಾಗಿ ದಂಗು ಬಡಿದವನಂತಾದ . ಭಾಗಿಲು  ತಗೆದ ತಕ್ಷಣ ಎದುರಿಗೆ ಕಂಡಿದ್ದು ಸ್ನೇಹಾಳ ತಂದೆ ಶಿವಲಿಂಗಪ್ಪನವರು. ಸಾಕ್ಷಾತ್ ಪರಶಿವನ ಅಪರಾವತಾರ  ಎಂಬತ್ತೆ ಕಾಣುತ್ತಿದ್ದರು  ಹಣೆಗೆ ವಿಭೂತಿ   ಹಚ್ಚಿಕೊಂಡು. ವಯಸ್ಸಾದರೂ ಅವರ ದೇಹವು ಹಾಗೆ ನೀಳ ಹಾಗು ಸದೃಡವಾಗಿ  ಇತ್ತು. ಅವರನ್ನು ನೋಡಿದ ತಕ್ಷಣ ಪುಟ್ಟನಿಗೆ ಕೈ ಕಾಲುಗಳಲ್ಲಿ ಸ್ವಲ್ಪ ನಡುಕ ಹುಟ್ಟಿತ್ತು. ಆದರೂ  ಧೈರ್ಯ  ತಂದುಕೊಂಡು " ಅಂಕಲ್ ನನ್ನ ಹೆಸರು ಪುಟ್ಟರಾಜು ಅಂತ, ನಾನು ಸ್ನೇಹಾಳ ಜೊತೆಯಲ್ಲೇ ಕೆಲಸ ಮಾಡೋದು, ನಾನು ಅವಳ ಸ್ನೇಹಿತ " ಎಂದಾಕ್ಷಣ ಶಿವಪ್ಪನವರು ಸಂತೋಷದಿಂದಲೇ " ಬನ್ನಿ ಬನ್ನಿ, ಒಳಗೆ ಕೂತ್ಕೊಳ್ಳಿ ಸ್ನೇಹ ಒಳಗೆ ಇದಾಳೆ ಕರೀತಿನಿ " ಅಂತ ಸಹಜ ಮಾತುಗಳಲ್ಲೇ  ಅವನನ್ನು ಕರೆದು ಕೂರಿಸಿದರು. ಅಲ್ಲೇ ಇದ್ದ ಸೋಫಾ ಮೇಲೆ ಕೂತು ಜೇಬಿನಿಂದ ಕರವಸ್ತ್ರ ತೆಗೆದು ಹಣೆಯ ಮೇಲಿದ್ದ  ಬೆವರನ್ನು ಒರೆಸಿಕೊಂಡು ಕೂತುಕೊಂಡ. ಅಪ್ಪ ಕೂಗಿದರು ರೂಮಿನಲ್ಲೇ ಇದ್ದ ಸ್ನೇಹ ಮಾತ್ರ ಹೊರಗೆ ಬರಲಿಲ್ಲ ಭಯದಿಂದ.ಸ್ನೇಹಾಳಿಗೆ ಪುಟ್ಟ ಮನೆಗೆ ಬರುವ ವಿಷಯ ಮೊದಲೇ ತಿಳಿದಿತ್ತು.   ಶಿವಪ್ಪನವರಿಗೆ ನಾನು ಕರೆದರೂ  ಯಾಕೆ ಅವಳು ಹೊರಗೆ ಬರುತ್ತಾ ಇಲ್ಲ ಎಂಬುದನ್ನು ಯೋಚಿಸುತ್ತ ಕೋಣೆ ಬಳಿ ಹೋಗಲು ಎದ್ದಾಕ್ಷಣ  , ಪುಟ್ಟ ರಾಜು " ಅಂಕಲ್ ನಾ ನಿಮ್ಮ ಬಳಿಯೇ ಮಾತು ಆಡಲು ಬಂದಿರುವೆ " ಅಂದನು ಸ್ವಲ್ಪ ನಡುಗುವ ದನಿಯಿಂದ. ಅಷ್ಟೊತ್ತಿಗೆ ಸ್ನೇಹಾಳ ತಾಯಿ ಬಂದು ಅಡುಗೆ ಮನೆಯ ಬಾಗಿಲ ಬಳಿ ನಿಂತಳು. ಸ್ನೇಹಾಳ  ತಂಗಿ ರಮ ದೂರದಲ್ಲೇ ರೂಮಿನ ಮಂಚದಮೇಲೆ ಕೂತಿರುವುದು ಇವನಿಗೆ ಕಂಡಿತು. " ಹೇಳಪ್ಪ ಅದೇನು ವಿಚಾರ " ಅಂತ ಶಿವಪ್ಪನವರು ಹೇಳುತ್ತಿರುವಂತೆಯೇ "ಕಾಫೀ ಕುಡಿತಿರೋ   ಅಥವಾ  ಟೀ ಕುಡಿತಿರೋ" ಅಂತ ಸ್ನೇಹಾಳ ತಾಯಿ ಕೇಳಿದ ತಕ್ಷಣ " ಏನು ಬೇಡ ಆಂಟಿ , ನನ್ನದೆಲ್ಲ ಆಗಿದೆ , ನಿಮ್ಮ ಬಳಿಯಲ್ಲಿ ಒಂದು ಮುಖ್ಯವಾದ ವಿಷಯ ಹೇಳಬೇಕು ಅಂತ ಬಂದಿದೀನಿ,ನೀವು ಕೂಡ  ಕುಳಿತುಕೊಳ್ಳಿ " ಎಂದನು. ಶಿವಪ್ಪನವರಿಗೆ ಮಗಳು ಕೂಗಿದರು ಹೊರಗೆ ಬಾರದ್ದು, ಪುಟ್ಟರಾಜು ಹೀಗೆಲ್ಲ ಮಾತನಾಡುತ್ತಿರುವುದು ಮನಸ್ಸಿಗೆ  ಒಂದು ರೀತಿಯ ಕಸಿವಿಸಿಯಾಗಿ, ಗೊಂದಲಕ್ಕೆ ದಾರಿಯು ಮಾಡಿಕೊಟಿತ್ತು , ಶಿವಪ್ಪನವರ ತಲೆಯಲ್ಲಿ ಅನೇಕ ವಿಷಯಗಳು ಹಾಗೆ ಸುಳಿದಾಡತೊಡಗಿದವು. ಅಷ್ಟರಲ್ಲೇ ಸುಮ್ಮನೆ ಕುಳಿತಿದ್ದ ಶಿವಪ್ಪನವರಿಗೆ  " ಅಂಕಲ್ ತಾವು ದಯವಿಟ್ಟು ನನ್ನನ್ನು ತಪ್ಪು ತಿಳಿಯ ಬಾರದು, ನಾನು ನಿಮಗೆ ಒಂದು ವಿಷಯ ಹೇಳ್ತೀನಿ, ನಾನು ಆ ವಿಷಯವನ್ನು ಮಾತ್ ಆಡೋದು ಅದೆಷ್ಟು ಸರಿಯೋ ತಪ್ಪೋ ನನಗೆ ಗೊತ್ತಿಲ್ಲ , ಆದರು ಅದನ್ನ ತಮ್ಮ ಬಳಿ ಹೇಳ್ತೀನಿ, ದಯವಿಟ್ಟು ನೀವು ಬೇಜಾರು ಮಾಡಿಕೊಬಾರದು" ಎಂದಾಕ್ಷಣ ಶಿವಪ್ಪನರಿಗೆ ಎಲ್ಲವೂ ಅರ್ಥವಾಗಿಯೇ ಬಿಟ್ಟಿತು. ಮತ್ತೆ ಮೌನವಾಗಿಯೇ ಅವನ ಮುಖ ನೋಡಿದರು. ಪುಟ್ಟನು ಮಾತನ್ನು ಮುಂದುವರೆಸುತ್ತ " ನಾನು ಸ್ನೇಹ ಬಹಳ ದಿನದಿಂದ ಒಬ್ಬರನ್ನು ಒಬ್ಬರು ನೋಡಿದ್ದೇವೆ , ಜೊತಗೆ ಕೆಲಸವನ್ನು ಕೂಡ ಮಾಡಿದ್ದೇವೆ, ಅವಳು ತುಂಬಾ ಬುದ್ದಿವಂತಳು, ಒಳ್ಳೆಯವಳು ಹಾಗಾಗಿ ಸಹಜವಾಗಿಯೇ ನಾನು ಅವಳನ್ನು ಇಷ್ಟ ಪಡಲು ಶುರು ಮಾಡಿದೆ. ಈ ವಿಷಯವನ್ನು ಅವಳಿಗೂ ಹೇಳಿದೀನಿ. ಅದಕ್ಕೆ ಅವಳು ನಿಮ್ಮ ಬಳಿಯೇ ಮಾತನಾಡಿ ಅಂದಳು" ಎಂದು ಸುಮ್ಮನಾದನು . ಅದಕ್ಕೆ  ಗಾಬರಿ , ಬೇಜಾರು ಜೊತೆಗೆ ಕೋಪದಿಂದ  " ಅದಕ್ಕೆ ನಾನು ಏನು ಮಾಡಬೇಕು  ? " ಅಂದರು ಶಿವಪ್ಪನವರು. ಪುಟ್ಟ ಸ್ವಲ್ಪ  ಧೈರ್ಯ  ತಂದುಕೊಂಡು " ನೀವು ಒಪ್ಪಿದರೆ ನಾನು ಅವಳನ್ನು ಮದುವೆ ಆಗ್ತೀನಿ, ನಾವಿಬ್ಬರು ಪರಸ್ಪರ ಪ್ರೀತಿಯಿಂದ ಸಾಯೋತನಕ ಜೊತೇಲಿ ಇರ್ತಿವಿ " ಅಂದು ಸುಮ್ಮನಾದ.               
             
             ಸಹಜವಾಗಿಯೇ ಎಲ್ಲ ಹುಡುಗಿಯರ ಅಪ್ಪನವರಿಗೆ ಇಂತಹ ಸಂದರ್ಬದಲ್ಲಿ ಸಿಟ್ಟು ಬರುವಂತೆ ,ಶಿವಪ್ಪನವರಿಗೂ   ಕೋಪ ಬಂದಿತು. ಅದೆಲ್ಲವನ್ನು ಹಾಗೆ ನುಂಗಿಕೊಂಡು ಶಿವಪ್ಪನವರು " ನಿಮ್ಮ ಊರು ಯಾವುದು? ಯಾವ ಜಾತಿ ನಿಮ್ಮದು ?" ಅಂದರು. ಪುಟ್ಟನು" ಅಂಕಲ್ ನಮ್ಮದು ಹಾಸನದ ಹತ್ರ ಇರುವ ಒಂದು ಪುಟ್ಟ ಅಗ್ರಹಾರ, ನಾನು ಬ್ರಾಹ್ಮಣ ಜಾತಿಯವನು"ಎಂದದ್ದೆ ತಡ , ಅಲ್ಲಿತನಕವೂ  ಕೋಪವನ್ನೆಲ್ಲ ತನ್ನೊಳ್ಳಗೆ ನುಂಗಿಕೊಂಡಿದ್ದ ಶಿವಪ್ಪನವರು,ಬಾಯಿ ಬಿಟ್ಟು ಜೋರಾಗಿ " ಎದ್ದೇಳೋ ಮೇಲೆ , ಹೋಗೋ ಹೊರಗಡೆ , ಒಂದು ಕ್ಷಣವೂ ಇಲ್ಲಿ ನಿಲ್ಲಬೇಡ " ಎಂದರು. " ನೀನು ಯಾರು ?  ನಿನ್ನ ಜಾತಿ ಏನು ? ನಿನಗೆ ಏನಿದೆ ಈ ಶಿವಪ್ಪನ ಮಗಳನ್ನು   ಮದುವೆ  ಆಗಲು ಅರ್ಹತೆ ? " ಅಂದಾಕ್ಷಣ ಪುಟ್ಟನಿಗೆ ಭಯವಾಗಿ  ಏನು ಮಾಡುವುದೆಂದು ತಿಳಿಯದೆ ಹೊರಗೆ ನಡೆದೆ ಬಿಟ್ಟನು. ಸ್ನೇಹಳು   ರೂಮಿನಲ್ಲೇ ಈ ಮಾತನ್ನು ಕೇಳಿಸಿಕೊಂಡು ಪುಟ್ಟನನ್ನು ಮಧುವೆ ಆಗೋದು ಅಸಾದ್ಯ ಎಂದು ಕಣ್ಣೀರು ಇಟ್ಟಳು. ಪುಟ್ಟನು ದಾರಿಯುದ್ದಕ್ಕೂ " ಛೇ  ಏನು ಮಾಡೋದು ? ನನ್ನನ್ನು ಹೊರಗೆ ಹೋಗು ಎಂದು ನಿರ್ದಾಕ್ಷ್ಯಣ್ಯವಾಗಿ  ನನ್ನನ್ನು  ಹೊರಹಾಕಿದ    ಅವರನ್ನು ಮತ್ತೆ ಹೇಗೆ ಹೋಗಿ ಮಾತಾಡಿಸಲಿ ,ಅವರು ನನ್ನನು ಮತ್ತೆ ಹೊಳಗೆ ಕರೆದು ಮಾತಾಡಿಸುತ್ತಾರೆಯೇ ? ನಾ  ಮದುವೆಯ ಬಗ್ಗೆ ಹೇಳಿದರೆ ಕೇಳುತ್ತಾರೆಯೇ ???  ಏನು ಮಾಡಲಿ ??? " ಅಂತ ಯೋಚಿಸುತ್ತ ನಡೆಯ ತನ್ನ  PG  ಕಡೆಗೆ   ಕಡೆಗೆ    ನಡೆಯ ತೊಡಗಿದ.

                ಸ್ನೇಹಳಿಗೆ  ತನ್ನ ಮೊಬೈಲ್ ಇಂದ ಒಂದು ಸಂದೇಶವನ್ನು  ಕಳುಹಿಸಿದ , ಯಾವುದೇ ಉತ್ತರ ಬರಲಿಲ್ಲ ಅವಳ ಕಡೆ ಅವಳಿಂದ. ಎಷ್ಟು ಹೊತ್ತು ಕಾದರು ಯಾವುದೇ ಉತ್ತರವಿಲ್ಲ ಸ್ನೇಹಾಳ ಕಡೆಯಿಂದ. ದುಃಖ ಇಮ್ಮಡಿಯಾಗಿ ಬಂದರು ನುಂಗಿಕೊಂಡು ಅನೇಕ ಯೋಚನೆಗಳೊಂದಿಗೆ ಮುನ್ನೆಡೆಯ ತೊಡಗಿದ. "ಯಾಕೆ ನಮ್ಮನ್ನು  ಅವರು ಅರ್ಥ  ಮಾಡಿಕೊಳ್ಳುತ್ತಿಲ್ಲ ?  ಬೆಳೆಯುವಾಗ ಅಡ್ಡ ಬಾರದ , ಓದುವಾಗ ಅಡ್ಡ ಬಾರದ , ಪ್ರೀತಿಸುವಾಗಲು ಅಡ್ಡ ಬಾರದ , ಈ ಜಾತಿ ಮತ್ತು  ಅಂತಸ್ತುಗಳು ಈ ಮದುವೆಯ ವಿಷಯಕ್ಕೆ ಮಾತ್ರ  ಯಾಕೆ ಅಡ್ಡ ಬರುತ್ತವೆ ??? ಇಷ್ಟೊಂದು ಬಸವ, ಸರ್ವಜ್ಞ , ಗಾಂಧಿ, ಕುವೆಂಪುರವರ ತತ್ವ , ಮಾನವತಾವಾದವನ್ನು ಕೇವಲ ನಾವು ಒಪ್ಪಿದ್ದೇವೆ ಹೊರತು ಯಾಕೆ ಅನುಸರಿಸುತ್ತ ಇಲ್ಲ ??? ನಾವು ಎಷ್ಟೇ ಓದಿದರೂ , ತಿಳಿದುಕೊಂಡರೂ, ಏಕೆ  ಹೀಗೆ ಮದುವೆ ವಿಷಯದಲ್ಲಿ ಮಾತ್ರ  ವಿಚಿತ್ರವಾಗಿ  ವರ್ತಿಸುತ್ತೇವೆ ??? "  ಎಂಬ  ನೂರಾರು ಯೋಚನೆಗಳು  ತಲೆಯಲ್ಲಿ ತುಂಬಿಕೊಂಡವು   ಮನೆ ಸೇರುವಷ್ಟರಲ್ಲಿ " ಸ್ನೇಹ ನನ್ನನ್ನು ಇನ್ನು ಮುಂದೆ ಮಾತಾಡಿಸುವುದಿಲ್ಲ , ಅವಳು ನನ್ನನ್ನು ಅವಳಪ್ಪ , ಅಮ್ಮನ ವಿರೋಧ ಕಟ್ಟಿಕೊಂಡು ಹೇಗೆ ಪ್ರೀತಿಸಿಯಾಳು ?? ಅವರಪ್ಪನನ್ನು ಒಪ್ಪಿಸದೆ ಹೇಡಿಯಾಗಿ ಬಂದೆನಲ್ಲ...  ಛೇ ನಾನೆಂತ ಮೂರ್ಖ , ಇನ್ನು ಅವಳು ನನಗೆ ಸಿಗುವುದೇ ಇಲ್ಲ, ಅವಳು  ಇಲ್ಲದೇ ನಾನು ಹೇಗೆ ಬಾಳಲಿ ಅಂತ ಭಾರವಾದ ಹೃದಯವನ್ನು ಹೊತ್ತು ಹೇಗೆ ನಾನು ಜೀವನ ಕಳೆಯಲಿ  , ಮೊದಲ ಬಾರಿಗೆ ಬಂದ ಕಣ್ಣೀರ ಹನಿಗಳನ್ನು ಒರೆಸಿಕೊಂಡು ಸ್ನೇಹ ನನಗಿನ್ನೂ ಗಗನ ಕುಸುಮ ಮಾತ್ರ ಅಂತ ಅಂದುಕೊಳ್ಳುತ್ತ , ಕೂತಲ್ಲಿಯೇ ಯೋಚನೆಯಲ್ಲಿ  ಮುಳುಗಿದ. ಅವನ ಮನದೊಳಗಿನ ಆ ಪ್ರಶ್ನೆಗಳಿಗೆ ಉತ್ತರ ಇನ್ನು ಈ ಸಮಾಜದೊಳಗೆ ನನಗೆ ಸಿಗುವುದಿಲ್ಲ ಎಂದು ತನ್ನನ್ನು  ಮತ್ತು ಸಮಾಜವನ್ನು ಶಪಿಸುತ್ತಿರುವಂತೆಯೇ ಕಣ್ಣುಗಳು ಕಣ್ಣೀರಿಂದ ಮಂಜಾಗತೊಡಗಿದವು , ತಾನು ಸುಸ್ತಾಗಿ , ಜಾರಿ ಕುಳಿತಿದ್ದ  ತನ್ನ  ಮಂಚದ ಒಂದು ತುದಿಗೆ ಹಾಗೆ ಹೊರಗಿ , ಪ್ರಪಂಚದ ಪರಿವೆ ಇಲ್ಲದೆ ಕಣ್ಣು ಮುಚ್ಚಿದನು.        


ನಿಮಗಾಗಿ 
ನಿರಂಜನ್ 

6 ಕಾಮೆಂಟ್‌ಗಳು:

  1. ಸಕತ್ತಾಗಿದೆ ಮಗಾ ಲೇಖನ. ಅದ್ರಲ್ಲೂ ವಿಶೇಷವಾಗಿ ಕೊನೆಗೆ ಸಮಾಜದ ವಾಸ್ತವಿಕತೆಯ, ಆಸಹಾಯಕತೆಯ ಬಗ್ಗೆ ಹೇಳಿರೋ ಮಾತುಗಳು ಅದ್ಭುತವಾಗಿವೆ.
    ಶಹಬ್ಭಾಷ್......!!!!!!!!
    ಹೀಗೆ ಬರೀತಿರು.... ಆಲ್ ದಿ ಬೆಸ್ಟ್......... :-)

    ಪ್ರತ್ಯುತ್ತರಅಳಿಸಿ
  2. Sir,, its bit lenghthy stil a very gud story.. is it your own experience or what ????. good work sir good msg at the end :)

    ಪ್ರತ್ಯುತ್ತರಅಳಿಸಿ
  3. Good story...But found a lot of spelling and grammatical mistakes...My kannada grammar is not so great but here is a few mistakes i found....Correct them if possible and delete this comment.

    ಭಾರಿಗೆ
    ಕಾಣುಸ್ತ
    ದೈರ್ಯ
    ಇದಾಳೆ ಕರಿತಿನಿ
    ಬಾರವಾದ
    ಅಗಾಧವಾದ
    ಬೇಕಾಂತಲೇ

    ಪ್ರತ್ಯುತ್ತರಅಳಿಸಿ