ಭಾನುವಾರ, ಏಪ್ರಿಲ್ 22, 2012

ಪ್ರಕೃತಿಯ

                               
                                                ಮರೆತೆವಾ ನಾವೆಲ್ಲರು.......

ದೊಂದು ರಜ ದಿನ , ಬೆಳಿಗ್ಗೆ ಜಲ್ದಿ ಎದ್ದು  ಬೇಸಗೆಯ  ಸೂರ್ಯನ ಎಳೆ ಬಿಸಿಲಿನಲ್ಲಿ  ಒಂದು ಸಣ್ಣ ವಾಕ್ ಹೊರಟಿದ್ದೆ. ಎಲ್ಲರೂ ಇಷ್ಟ ಪಡುವಂತೆಯೇ ನಾನು ಕೂಡ ಈ ಹಸಿರು  ಗಿಡ-ಮರ, ಹಕ್ಕಿ-ಪಕ್ಷಿಗಳ ಚಿಲಿ -ಪಿಲಿ ಜಾಸ್ತಿ ಇರುವ, ನಾಯಿಗಳು ಹಾಗು ಜನಸಂದಣಿ ಕಡಿಮೆ ಇರುವ ದಾರಿಗಳನ್ನೇ ಇಷ್ಟ ಪಡ್ತೇನೆ ಹಾಗು ಅಂತಹ ಜಾಗಗಳಲ್ಲಿ ಸದಾ ಇರಲು ಕೂಡ  ಬಯಸುತ್ತೇನೆ. ಅದೇ ತರ ಆ ದಿನ ಕೂಡ ಅಂತಹ ಒಂದು ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದೆ ವಾಕ್ ಮಾಡಲು.



 
             
               ನಿಜಕ್ಕೂ ಅದು ಒಂದು ಪಕ್ಕ ರೆಸಿಡೆನ್ ಶಿಯಲ್  ಪ್ರದೇಶ ಆದರೂ ಕೂಡ ಸಕತ್ ಡಿಫರೆಂಟ್ ಆಗಿ ಇತ್ತು. ಆ ರಸ್ತೆಯ ಇಕ್ಕೆಲಗಳಲ್ಲೂ ಸುಂದರ ಮನೆಗಳು , ಮನೆಗಳು ಸ್ವಲ್ಪ ಹಳೆಯವಾಗಿದ್ದರೂ, ಸುಂದರವಾಗೇ ಇದ್ದವು. ಒಂದು ಕ್ಷಣ ನನಗೆ ಏನು ಇಂತಹ ಬೆಂಗಳೂರಿನಲ್ಲಿ, ಅದು ಈ ಪರಿಯ ಬೇಸಗೆಯ ಕಾಲದಲ್ಲೂ  ಈ ರೀತಿಯ ವಾತಾವರಣ ?? . ನಿಜವಾಗಿಯೂ  ಸ್ನೇಹಿತರೆ  ಸೂರ್ಯನ ಬಿಸಿಲು ಎಲ್ಲಿ ರಸ್ತೆಗೆ ಬಿದ್ದು ಬಿಡುತ್ತೋ ಅಂತ ರಸ್ತೆಯ ಬದಿಯಲಿದ್ದ ಆ ಬೃಹದಾಕಾರದ ಮರಗಳು ತಾವೇ ಬಿಸಿಲೀರಿ ರಸ್ತೆಗೆ ನೆರಳಾಸಿದ್ದವು. ಕೋಗಿಲೆ ಕೂಗು ಮಾವಿನ ಮರಗಳಿಂದ ನನ್ನ ಕಿವಿಗೆ ಕೇಳಿದರೆ, ಸಂಪಿಗೆಯ ಸುವಾಸನೆ ಗಗನ ಚುಂಬಿಸುತ್ತಿದ್ದ ಆ ಸಂಪಿಗೆ ಮರದಿಂದ ನನ್ನ ಮೂಗಿಗೆ ಬಡಿಯುತ್ತಿತ್ತು. ರಸ್ತೆಗೆ ಬಿದ್ದ ಗಸಗಸೆ ಮರದ ಹಣ್ಣುಗಳ ಆ ವಾಸನೆಯಂತು ಬಾಯಲ್ಲಿ ನೀರೂರಿಸುತಿತ್ತು , ಹಕ್ಕಿ ಪಕ್ಷಿಗಳು ಆ ಮರಗಳಲ್ಲಿ ಕಾಣದಂತೆ ಅಡಗಿ ಹಾಡಿದರೂ  ಅವುಗಳ ಹಾಡು ಮಾತ್ರ ನನ್ನ ಕಿವಿಗೆ ಕೇಳಿಸುತ್ತಿತ್ತು. ಕಾಯಿಡಿದ ಮಾವಿನ ಮರದ ಮೇಲೊಂದು ಮಂಗನ  ಕುಟುಂಬವು ಮಾವಿನ ಕಾಯಿಯನ್ನು ತಿನ್ನುವ ದೃಶ್ಯವಂತೂ ಸೊಗಸಾಗಿತ್ತು. ಮನೆಯ ಮುಂದೆ ಇರುವ ಸ್ವಲ್ಪ ಜಾಗದಲ್ಲೇ ಅಲ್ಲಿಯ ಜನರು ಹೂವು ಹಣ್ಣುಗಳ ಗಿಡ ಸಾಕಿಕೊಂಡಿದ್ದರು. ಪೇರಲ, ಸಪೋಟ ,ಗಸಗಸೆ, ದಾಳಿಂಬೆ ಹಣ್ಣಿನ ಗಿಡಗಳಾದರೆ, ಮಲ್ಲಿಗೆ ಬಳ್ಳಿಗಳು , ದಾಸವಾಳ , ಕಣಗಿಲೆ ಹಾಗೆ ಇನ್ನು ಹಲವು ಹೂವಿನ ಗಿಡ ಬಳ್ಳಿಗಳಿದ್ದವು. ದೊಡ್ಡ ಪೊದೆಗಳ ತರ ಇದ್ದ ಹೂವು ಗಿಡ ಬಳ್ಳಿಗಳು ಸಣ್ಣ ಸಣ್ಣ ಪಕ್ಷಿಗಳಾದ ಗುಬ್ಬಿಗಳು,ಹಮ್ಮಿಂಗ್ ಬರ್ಡ್ ಗಳಿಗೆ  ಆವಾಸ ಕಲ್ಪಿಸಿದ್ದವು.ಆದಿ ಬೀದಿಗಳೆಲ್ಲ, ಊರು ಕೇರಿಗಳೆಲ್ಲ, ಸಂಪೂರ್ಣ ಪ್ರಪಂಚವೆಲ್ಲ  ಹೀಗೆಯೇ  ಹಚ್ಚ ಹಸುರಾಗಿದ್ದರೆ , ಹಕ್ಕಿ-ಪಕ್ಕಿಗಳಿಂದ ತುಂಬಿದ್ದರೆ  ಅದೆಷ್ಟು ಚಂದ ಅಂತ ಅಂದು ಕೊಂಡೆ .




        






                   ಹಾಗೆ ಸವಿಯುತ್ತ ಮುಂದೆ ಸಾಗಿದ ನಾನು ಅಲ್ಲಿಯೇ ಮರಗಳ ನೆರಳಲ್ಲಿ ಆಡುತಿದ್ದ ಚಿಕ್ಕ ಮಕ್ಕಳ ಗುಂಪನ್ನು ಮಾತಾಡಿಸಿ, ಇವರೆಲ್ಲ ಇಂತಹ ವಾತಾವರಣದಲ್ಲಿ ಇರುವರಲ್ಲ ಅದೆಷ್ಟು ಅದೃಷ್ಟವಂತರು ಅಂತ ಮನಸ್ಸಿನಲ್ಲೇ ಅಂದುಕೊಂಡೆ. ಇದೆಲ್ಲವೂ ನಮ್ಮ  ಪ್ರದೇಶಗಳ ಒಂದು ಮುಖವಷ್ಟೇ. ಇನ್ನೊಂದು ಮುಖದ ಬಗ್ಗೆಯೂ ನಾನು ಹೇಳಲೇಬೇಕು.  ಹೀಗೆ ಮುಂದೆ ಬಂದ ನಾನು ಅಲ್ಲಿಯೇ ಇದ್ದ ನಮ್ಮ ಪ್ರದೇಶದಲ್ಲಿ  BBMP ನೋಡಿಕೊಳ್ಳುವ ಒಂದು ಉದ್ಯಾನವನವನ್ನು ಹೊಕ್ಕು , ಸ್ವಲ್ಪ ಹೊತ್ತು ಸುತ್ತಾಡಿದೆ. ಆ ಉದ್ಯಾನವನವೂ ಮರಗಿಡ, ಹೂ ಬಳ್ಳಿಗಳಿಂದ  ಅದ್ಬುತವಾಗಿದೆ. ಅಲ್ಲಿ ಜನಸಂದಣಿ ಜಾಸ್ತಿ ಇರುವ ಕಾರಣವೇನೋ ಹಕ್ಕಿ ಪಕ್ಷಿಗಳು  ಅಷ್ಟೊಂದು ಇಲ್ಲ . ಆದರೂ ನೋಡಲು ತುಂಬಾ ಹಸಿರಾಗಿದ್ದು ವಿಶಾಲವಾದ ಜಾಗ. ಎಲ್ಲಿ ನೋಡಿದರು   ಅಲ್ಲಿ ಹಸಿರು, ನೆಲ ಕಾಣದಂತೆ ಹುಲ್ಲು ಬೆಳಸಿ, ದಿನವು ಅದಕ್ಕೆ ನೀರುಣಿಸಿ BBMP  ಅದರ ಅಬಿವೃದ್ದಿ ಮಾಡುತ್ತಿದೆ. ಆ ಉದ್ಯಾನವನದಲ್ಲಿ , ಹಸಿರು ಹುಲ್ಲಿದೆ, ಮರಗಿಡಗಳ ನೆರಳಿದೆ, ಬಹಾಳೋಷ್ಟು ನೀರಿದೆ ಆದರೆ ಉದ್ಯಾನವನಕ್ಕೊಂದು ದೊಡ್ಡ ತಂತಿ ಬೇಲಿಯೂ ಇದೆ. ಮನುಷ್ಯ ಪಕ್ಷಿಗಳಿಗೆ ಬಿಟ್ಟರೆ ಎಲ್ಲಿ ಯಾರಿಗೂ ಪ್ರವೇಶವಿಲ್ಲ. ಬೇಸಗೆಯ ದಿನವಾದರಿಂದ ಸೂರ್ಯ ಅಷ್ಟರಲ್ಲೇ ಸಾಕೊಷ್ಟು ಮೇಲೇರಿ ಬಂದಿದ್ದ ಪ್ರಕರವಾದ ಬಿಸಿಲನ್ನು ಕೂಡ  ಚೆಲ್ಲಿದ್ದ. ಅದೇ ಸಮಯದಲ್ಲಿ ಆ ಬಿಸಿಲಿಗೆ ದಣಿದಂತೆ ಕಾಣುತಿದ್ದ ೩ ಹಸುಗಳ ಗುಂಪೊಂದು ಅಲ್ಲಿ ಕಂಡಿತು. ಅಲ್ಲಿ ಹುಲ್ಲಿಗೆ ನೀರು ಹಾಯಿಸುತ್ತಿರುವುದು ಅವುಗಳಿಗೆ ಕಾಣುತ್ತಿವೆ , ಹಸಿರು ಹುಲ್ಲು ಕೂಡ ಅಲ್ಲಿದೆ ಆದರೆ ಅದೆಲ್ಲ ಆ ಹಸುಗಳಿಗೆ ಸಿಗುತ್ತಿಲ್ಲ. ಅವು ನೋಡುತ್ತಲೇ ಇವೆ ಹೊರಗಡೆ ಇಂದ. ಅವೆಷ್ಟು ಬಾಯಾರಿದ್ದವೋ ಅದೆಷ್ಟು ಹಸಿದಿದ್ದವೋ.???

                ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವೇನೆಂದರೆ ನಮ್ಮ  ನಾಗರಿಕತೆ ಹೆಚ್ಚಾಗಿ ಅವುಗಳಿಗೆ ಕುಡಿಯಲು ನೀರು, ಆಹಾರ ಸರಿಯಾದ ಪ್ರಮಾಣದಲ್ಲಿ ಈ ಪ್ರಾಣಿ ಪಕ್ಷಿಗಳಿಗೆ  ಪೇಟೆಗಳಲ್ಲಿ ಸಿಗುತ್ತಿಲ್ಲ . ಮೊದಲೆಂದರೆ ನೀರಿನ ಹೊರ  ಚರಂಡಿಗಳಿದ್ದವು, ಬೀದಿಗೊಂದು ನಲ್ಲಿ - ಬೋರುಗಳು, ಅಲ್ಲಿ ನಿಂತ ನೀರು , ಮುಚ್ಚದ ನೀರಿನ  ಟ್ಯಾಂಕುಗಳು  ಈ ಪ್ರಾಣಿ ಪಕ್ಷಿಗಳಿಗೆ ನೀರಿನ ಆಕರವಾಗಿರುತ್ತಿದ್ದವು , ಈಗ ಅವುಗಳು ಇಲ್ಲ. ನೀರಿನ ನಲ್ಲಿಗಳು ಈಗ  ನಮ್ಮ ಮನೆಯೊಳಗೇ ಇವೆ,  ಟ್ಯಾಂಕುಗಳಿಗೆ ಮುಚ್ಚಣಿಕೆಗಳು ಬಂದಿವೆ. ಇನ್ನು ಬೋರುಗಳಿದ್ದರು ಅವುಗಳಲ್ಲಿ  ನೀರು ಇಲ್ಲ. ಅದಕ್ಕೆ ಕಾರಣ ಭೂಮಿಯಲ್ಲಿ ಅಂತರ್ಜಲದ ಕೊರತೆ.  ಹಾಗಾಗಿ ಈ ಬೆಸಿಗೆಯಲೊಂತು ಪಕ್ಷಿಗಳಿಗೆ ನೀರುಡುಕುವುದು ಅಸಾದ್ಯದ ಕೆಲಸ. ಸ್ನೇಹಿತರೆ ಸ್ವಲ್ಪ ಯೋಚಿಸಿ ನಮಗಂತೂ ಬೀದಿ ಬೀದಿಗೆ ತಂಪು ಪಾನೀಯಗಳ ಅಂಗಡಿಗಳು, Fruit  juice  ಸಿಗುವ ಅಂಗಡಿಗಳು ಇವೆ ಆದರೆ ಈ ಚಿಕ್ಕ ಪುಟ್ಟ ಪಕ್ಷಿಗಳಿಗೆ ನೀರೆಲ್ಲಿ ಸಿಗಬೇಕು ???   ನಮ್ಮ ಮನೆಯ ಮುಂದಿನ ಜಾಗವನ್ನೆಲ್ಲ ಕಾಂಕ್ರೀಟು ಗೊಳಿಸಿ, ಕಾರ್ ಪಾರ್ಕಿಂಗ್ ಮಾಡಿಕೊಂಡರೆ ಹೇಗೆ ??? ಮಕ್ಕಳಿಗೆ Dust allergy ಅಂತ ಮಣ್ಣಿನ ಜಾಗ ಬಿಡದೆ, ಹಾವು, ಹುಳು ಹುಪ್ಪಡಿ ಸೇರುತ್ತವೆಂದು ಮನೆಯ ಮುಂದೆ ಗಿಡ ಮರಗಳನ್ನು ಹಾಕದಿದ್ದರೆ ಪಕ್ಷಿಗಳು ಹೇಗೆ ಬದುಕಬೇಕು ???? ಎಷ್ಟೋ ಜನರು ಒಣಗಿದ ಎಲೆಗಳು ಬೀಳುತ್ತವೆ, ದಿನವು ಕಸ ಹೊಡೆಯುವರಾರು ಎಂದು ಮರಗಳನ್ನು ಕಡಿಸಿರುವವರು ಇದ್ದಾರೆ. ನಾವು ಹೀಗೆ ಮಾಡಿದರೆ, ಮರ ಗಿಡ ಕಡಿದರೆ, ಬೆಳಸದಿದ್ದರೆ, ಸಾಮನ್ಯವಾಗಿ ನಮ್ಮ ಜೊತೆಯಲ್ಲೇ ಸಾವಿರಾರು ವರ್ಷಗಳಿಂದ ಸಹಬಾಳ್ವೆ ಮಾಡಿಕೊಂಡಿದ್ದ ಕೋತಿ, ಗಿಳಿ, ಪಾರಿವಾಳ, ಗುಬ್ಬಿ, ಹಮ್ಮಿಂಗ್ ಬರ್ಡ್, ಮೈನ, ಕೋಗಿಲೆಗಳು, ಟಿಟ್ಟಿಬಗಳು  ಹೇಗೆ ನಮ್ಮೊಡನೆ ಇರುತ್ತವೆ. ಅವುಗಳಿಗೆ ನೀರು, ದಾನ್ಯ, ಗೂಡು ಕಟ್ಟಲು, ಮಾವು, ಸಂಪಿಗೆ, ಬೇವು, ಮಲ್ಲಿಗೆ ಬಳ್ಳಿಗಳು ಎಲ್ಲಿ ಸಿಗುತ್ತವೆ ??? ನಾಳೆ  ಇವುಗಳೊಂದಿಗೆ ಬಾಳುವ ಸಹಜ ಸುಖವನ್ನು ನಾವು ಕಳೆದು ಕೊಲ್ಲುವುದಿಲ್ಲವೇ ??? ನಮ್ಮ ಮುಂದಿನ ಪೀಳಿಗೆಗೆ ನಾವು ಉಳಿಸಿ ಕೊಡುವುದಾದರೂ ಏನು ???  ವರ್ಷ ವರ್ಷಕ್ಕೂ ಬರಿ ಬಿಸಿಲು ಜಾಸ್ತಿ ಆಗುತ್ತಿದೆ ಎಂದು ನಾವು ಅಂದುಕೊಳ್ಳುತ್ತೇವೆ ಮತ್ತು ಪ್ರಕೃತಿಗೆ ಇಡಿ ಶಾಪವನ್ನೇ ಹಾಕುತ್ತೇವೆ ಹೊರತು ನಾವು ಈ ಬಿಸಿಲು  ಕಡಿಮೆ ಆಗಲು ಏನಾದರು ಕ್ರಮ ಕೈಗೊಂಡಿದ್ದೇವೆಯೇ ??? ಬರಿ ಚೆನ್ನಾಗಿರುವ ಪ್ರಕೃತಿಯನ್ನು ಸವಿಯುವ ನಾವು ಆ ಸೊಬಗನ್ನು ಮತ್ತೊಷ್ಟು ಹೆಚ್ಚಿಸಲು ನಾವೇನಾದರೂ ಮಾಡುತ್ತಿದ್ದೇವೆಯೇ ???  ಹಕ್ಕಿ ಪಕ್ಕಿಗಳಿಗೆ ನೀರುಣಿಸಿದ್ದೆವೆಯೇ ???
 


                ಸ್ನೇಹಿತರೆ, ನಾವೆಷ್ಟೇ ಮುಂದುವರಿದರೂ, ಎಷ್ಟೇ ದುಡಿದರೂ, ಪ್ರಾಣಿ ಪಕ್ಷಿಗಳಿಲ್ಲದ, ಮರ-ಗಿಡ, ಬಳ್ಳಿಗಳಿಲ್ಲದ, ಹಕ್ಕಿ ಪಕ್ಕಿಗಳ ಕೂಗಿಲ್ಲದ ನಮ್ಮ  ಬಾಳು ನಿಜವಾಗಿಯೂ ಬರಡು, ಅಂತಹ ಆ ಜೀವನ ಅಸ್ತಿ ಇಲ್ಲದ ದೇಹದಂತೆ. ನಮ್ಮ ಬಳಿ ಅದೆಷ್ಟೇ ದುಡ್ಡು ಇದ್ದರು, ಎಂತಹ ಮನೆ ಇದ್ದರು, ಮನೆಯ ಸುತ್ತ ಹಸಿರು ಬಳ್ಳಿ, ಕುಡಿಯಲು ನೀರು ಇಲ್ಲ ಅಂದರೆ ಅದು ನಮಗೆ ಬದುಕಲು ಯೋಗ್ಯವೇ. ಹಾಗಾಗಿ ನಾನು ವರ್ಷಕ್ಕೆ ಒಂದಾದರು ಗಿಡ ನೆಡುವ ಪ್ರತಿಜ್ಞೆ ಮಾಡಿದ್ದೇನೆ ಅದು ಎಲ್ಲಾದರೂ ಸರಿಯೇ, ಯಾವ ಗಿಡವಾದರು ಸರಿಯೇ. ನಾನು ಗಿಡ ನೆಡಲೇ ಬೇಕು, ನನ್ನ ಮುಂದಿನ ಪೀಳಿಗೆಯು ನನಗೆ ಶಾಪ ಹಾಕದಿರುವಂತೆ ನಾನು ನಡೆದುಕೊಳ್ಳಬೇಕು. ನನ್ನ ಮುಂದಿನ ಜನಾಗಂಗಕ್ಕೆ ಹಾಗು ನನ್ನ ಮುಂದಿನ ಜೀವನದ ಒಳಿತಿಗಾಗಿ ಕೊನೆ ಪಕ್ಷ ವರ್ಷಕ್ಕೆ ಒಂದಾದರು ಒಳ್ಳೆಯ ಗಿಡ ನೆಡಬೇಕು. ನಾಲ್ಕು ಜನರಿಗೆ ಪ್ರಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತೀರ್ಮಾನಿಸಿದ್ದೇನೆ. ನೀವು ಕೂಡ ಯೋಚಿಸಿ, ಚಿಂತಿಸಿ ನಮ್ಮ ಹಿರಿಯರು ನಮಗೆ ಕೊಟ್ಟ ಈ ವಾತಾವರಣವನ್ನು ನಾವು ಒಳ್ಳೆಯ ರೀತಿಯಲ್ಲೇ ನಮ್ಮ ಮುಂದಿನವರಿಗೆ ಕೊಡಲು ನಿರ್ಧರಿಸಿ.


**  ಸದ್ಯಕ್ಕೆ  ನಮ್ಮ ಮನೆಗಳ ಮುಂದಿನ ಜಾಗಗಳಲ್ಲಿ, ಮಹಡಿಗಳ ಮೇಲೆ ಸ್ವಲ್ಪ ನೀರನ್ನು  ನಮ್ಮ ಪಕ್ಷಿಗಳಿಗೆ ಬೇಸಗೆಯಲ್ಲಿ ಕುಡಿಯಲು ಇಡಬೇಕು.
** ಚಿಕ್ಕ ಪುಟ್ಟ ಗಿಡ ಬಳ್ಳಿಗಳನ್ನು ಸಾದ್ಯವಾದರೆ ನಮ್ಮ ಮನೆಯಂಗಳಲ್ಲಿ, ಕುಂಡಗಳಲ್ಲಿ ಬೆಳೆಸಬೇಕು.
** ವರ್ಷಕ್ಕೆ ಒಂದಾದರು ನಮ್ಮ ಕೈಯಿಂದ ಗಿಡ ನೆಡಲೇಬೇಕು.
** ಆದೊಷ್ಟು ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ, ಮರ ಗಿಡ, ಹಕ್ಕಿ ಪಕ್ಷಿಗಳ ಬಗ್ಗೆ ಆಸಕ್ತಿ,  ಪ್ರೀತಿ ಹಾಗು ಜಾಗೃತಿ  ಮೂಡುವಂತೆ ಮಾಡಬೇಕು.

ನಿಮಗಾಗಿ 
ನಿರಂಜನ್

ಭಾನುವಾರ, ಏಪ್ರಿಲ್ 8, 2012

ಹನಿಗವನಗಳು .......


                                                        ಹನಿಗವನಗಳು .......
ಸ್ನೇಹಿತರೆ.....

ನಾ ಚಿಕ್ಕವನಾಗಿದ್ದಾಗಿನಿಂದಲೂ , ಅನೇಕ ಲೇಖಕರ ಲೇಖನಗಳಿಗೆ, ಮಾರು ಹೋಗಿದ್ದೇನೆ, ಅವುಗಳಿಂದ ಪ್ರಭಾವಿತನಾಗಿದ್ದೇನೆ, ಕಲಿತಿದ್ದೇನೆ, ಎಷ್ಟೋ ಬಾರಿ ಅವರಿಂದಲೇ ಪ್ರೇರೇಪಿತನಾಗಿ ಅವರನ್ನೇ ಅನುಕರಿಸಿದ್ದೇನೆ ಕೂಡ. ಅವರ ಶೈಲಿಗಳಲ್ಲೇ ಬರಹಗಳನ್ನು ಸಹ ಬರೆದಿದ್ದೇನೆ. ಅವರ ರೀತಿಯಲ್ಲೇ ಮಾತು ಕೂಡ ಆಡುತ್ತೇನೆ. ನಾನು ಅವರನ್ನು ಅನುಕರಿಸುತ್ತೇನೆ ಅನ್ನುವುದಕಿಂತ ಅವರ ಬರವಣಿಗೆ, ಶೈಲಿ  ಹಾಗು ಅವರ ಚಿಂತನೆಗಳಿಂದ ನಾನು ಅಷ್ಟೊಂದು ಪ್ರಭಾವಿತನಾಗಿದ್ದೇನೆ. ಸದಾ ನಗುವ, ನಗಿಸುವ , ನಾಲ್ಕೇ ನಾಲ್ಕು ಸಾಲುಗಳಲ್ಲೇ ಜೀವನ , ಪ್ರೀತಿ , ಸ್ನೇಹ, ಸಂಬಂದಗಳನ್ನು ಹಾಗು ವಿಡಂಬನೆಗಳನ್ನು ಹಾಸ್ಯದ ರೂಪದಲ್ಲಿ ಬಿಚ್ಚಿಡುವ ನಮ್ಮ ನೆಚ್ಚಿನ ಕವಿ ಚುಟುಕ ಬ್ರಹ್ಮರೆಂದೇ ಪ್ರಸಿದ್ದಿಯಾಗಿರುವ ಶ್ರೀ ದುಂಡಿರಾಜ್ ರವರ ಪ್ರಭಾವ ಕೂಡ ನನ್ನ ಮೇಲೆ ಅಷ್ಟಿಷ್ಟಲ್ಲ.  ಇಂತಹ ದೊಡ್ಡ ಹಾಸ್ಯ ಕವಿ  ದುಂಡಿರಾಜ್ ಸಾಹಿತ್ಯದ ಪ್ರಭಾವಕ್ಕೆ ಸಾಕ್ಷಿಯೇ ಈ ಕೆಳಗಿನ ನನ್ನ ಕೆಲವು ಹನಿಗವನಗಳು. ಈ ನನ್ನ ಹನಿಗವನಗಳನ್ನು ನಾನು ನನ್ನ ಮಾನಸ ಗುರುವಾದ ದುಂಡಿರಾಜ್ ರವರಿಗೆ  ಅರ್ಪಿಸುತ್ತಿದ್ದೇನೆ.  
         ಆಸೆ 
ಪರೂಪಕ್ಕೆ ಹತ್ತಿರ ಬಂದ
ನನ್ನವಳ ನಾ ಕೇಳಿದೆ
ಕೈ ಹಿಡಿದು
ಒಂದೇ ಒಂದು 'ಕೊಡುವೆಯ' .....
ಅದಕ್ಕವಳು ಹೇಳಿದಳು
ಸದ್ಯಕ್ಕೆ ಕೈ ಬಿಟ್ಟು ಬಿಡು'WAY"ಯ....
                          
      ನಿರಾಸೆ 
ನ್ನವಳ ಒಡಲು
ಪ್ರೀತಿಯ ಬಾರಿ  'ಕಡಲು'
ಅಂತ ತಿಳಿದಿದ್ದೆ....
ಅದು ನಿಜ ತಾನೇ
ಬಿದ್ದ ಮೇಲೆ  ನನಗೆ ಆಗುತ್ತಲೇ
ಇಲ್ಲ , ಇನ್ನು ಮೇಲೆ 'ಏಳಲು'....


  ಕಾಮನ ಬಿಲ್ಲು 
ದುವೆಯ ಮೊದಲು
ಮಾತು ಮಾತಿಗೂ ಬಿಡುತ್ತಿದ್ದಳು
ಪ್ರೀತಿಯ ಬಾಣಗಳನ್ನು,  ಹೂಡಿ  ನಗು ಮುಖದ ಬಿಲ್ಲು
ಈಗಲೂ ಕೊಡುತ್ತಾಳೆ  ಮಾತು ಮಾತಿಗೂ
ಶಾಕ್ ಕೊಡುವ ಕರೆಂಟ್ ಬಿಲ್ಲು, ನೀರು ಬಿಲ್ಲು

    ಮೊದಮೊದಲು 
ದುವೆಗೂ ಮೊದಲು 
ನನ್ನವಳ ಗಲ್ಲ 
ಸಿಹಿ ಬೆಲ್ಲ....
ಬಹಳ ದಿನವಾಯಿತಲ್ಲ
ಅದೇ ಸಿಹಿ ಬೆಲ್ಲ   
ಈಗ
ಹುಳಿ ಬೆಲ್ಲ  ........


    ಅನ್ವೇಷಣೆ 
ನಮ್ಮ ಪ್ರೀತಿ 
ನೆನ್ನೆ ಮೊನ್ನೆಯದಲ್ಲ 
ಪ್ರಿಯ
ಜನ್ಮ ಜನ್ಮಾಂತರದು...... 
ನಿಜ ನಿಜ 
ಪ್ರಿಯೆ 
ತುಂಬಾ 'ಹಳೆಯದು'
ಅದಕ್ಕೆ ನಾ ಹುಡುಕುತ್ತಿರುವೆ  
ಮತ್ತೊಂದು 'ಹೊಸದು'.... 


        ಇರುವೆ 
ಮೊದಮೊದಲು ನನಗನ್ನಿಸುತ್ತಿತ್ತು
ನೀ ನನ್ನ ಚಲುವೆ
ನಾ ನಿನಗಾಗಿಯೇ  'ಇರುವೆ'......
ಈಗಲೂ ಕೂಡ ಅನ್ನಿಸುತ್ತಿದೆ
ಇನ್ನೂ ಯಾಕೆ ನೀ
ನನ್ನ ಜೊತೆಯಲ್ಲೇ 'ಇರುವೆ'....

   ನಿನ್ನ  ನಲ್ಲ 
ಹೇ ಹುಡುಗಿ, ನಾ ನಿನ್ನ ನಲ್ಲ
ಕೊಡುವೆಯಾ ನಿನ್ನ ಗಲ್ಲ.....
ಲೊ ಹುಡುಗ, ಅದು ನಿನಗಲ್ಲ
ನನ್ನ ನಲ್ಲ ನೀ ಅಲ್ಲವೇ ಅಲ್ಲ.....

   ಬುದ್ದಿವಂತರು 
ದುವೆಗೂ ಮೊದಲೇ ಹುಡುಗರು
ಕಷ್ಟ ಪಟ್ಟು ಸಂಪಾದಿಸುತ್ತಾರೆ 
ಚಿಕ್ಕದೋ ದೊಡ್ಡದೋ ಒಂದು
'ಕೆಲಸ'.....
ಏಕೆಂದರೆ ???
ಖಾಲಿ ಇದ್ರೆ ಕೊಡುವಳಲ್ಲ
ಮುಂದೊಂದು ದಿನ ಮನೆಯ 
ಎಲ್ಲಾ  'ಕೆಲಸ'......


   ಕಿಲಾಡಿ
ಲೋ ಹುಡುಗ
ನೀ ತುಂಬಾ
ಪೋಲಿ , ಕಿಲಾಡಿ
"ಒಳ್ಳೆನಲ್ಲ".....
ಹೌದು ಹುಡುಗಿ
ನೀ ಹೇಳಿದ
ಹಾಗೆ ನಾ
ಒಳ್ಳೇ 'ನಲ್ಲ'

    ಬಲ್ಲೆ
ಗೊತ್ತಿತ್ತು ಒಂದಲ್ಲ
ಒಂದು ದಿನ
ಹೇಳುವಳು
ನೀ ನನಗೆ ಬರಿ
' ಸ್ನೇಹಿತ '
ಅದಕ್ಕೆ ನಾ ಕೂಡ
ಮಾಡಿದ್ದೆ
ಅವಳಿಗಾಗಿ
ಕರ್ಚು
'ಹಿತ' 'ಮಿತ '


ನಿಮಗಾಗಿ 
ನಿರಂಜನ್