ಬುಧವಾರ, ಜನವರಿ 15, 2014

ದೇಶಕ್ಕೆ


                                     ಸಾಮೂಹಿಕ ನಾಯಕತ್ವ ಬೇಕು , ಒಬ್ಬ ವ್ಯಕ್ತಿಯಲ್ಲ .... 

ಸ್ನೇಹಿತರೆ  

ನಿಮಗೆಲ್ಲ ಗೊತ್ತಿರುವ ಹಾಗೆ ಇನ್ನೇನು ನಮ್ಮ ಲೋಕಸಭಾ ಚುನಾವಣಾ ಹತ್ತಿರವಾಗುತ್ತಿವೆ. ಮತ್ತೆ ನನಗೆ  ಒಬ್ಬ ಒಳ್ಳೆಯ , ನಿಷ್ಕಳಂಕ ವ್ಯಕ್ತಿಯನ್ನು ನನ್ನ ಕ್ಷೇತ್ರದಿಂದ ನಾಯಕನನ್ನಾಗಿ ಲೊಕಸಬೆಗೆ ಚುನಾಯಿಸುವ ಅವಕಾಶವಿದೆ. ಈ ಸಮಯದಲ್ಲಿ ನಾನು  ಸ್ವಲ್ಪ ಎಚ್ಚರದಿಂದ  , ಹೆಚ್ಚಿನ ಜವಾಬ್ದಾರಿಯಿಂದ ನನ್ನ ಹಕ್ಕನ್ನು ಚಲಾಯಿಸಿ ಅತ್ಯತ್ತಮ ವ್ಯಕ್ತಿಯನ್ನು ಚುನಾಯಿಸ ಬೇಕಾಗಿದೆ. ಸದ್ಯದ ದೇಶದ ಪರೀಸ್ಥಿಥಿ ಮತ್ತು ನಮ್ಮ ಸುತ್ತ ಮುತ್ತಲಿನ ಪರೀಸ್ಥಿಯನ್ನು ಗಮನಿಸಿದಾಗ ನಾನೊಂತು  ಬಹಾಳೋಷ್ಟು ಯೋಚಿಸಿ ನನ್ನ ನಾಯಕನನ್ನು ನಾನು ನಿರ್ಧರಿಸುವ ಸಮಯ ಇದಾಗಿದೆ ಎಂದು ಅರಿತಿದ್ದೇನೆ.  ಈ ಸಮಯದಲ್ಲಿ ನನ್ನ ಮುಂದಿರುವ ಬಹು ದೊಡ್ಡ  ಪ್ರಶ್ನೆಯೆಂದರೆ ಯಾವ ನಾಯಕನನ್ನು ನಾನು ಚುನಾಯಿಸಬೇಕು ? ಎಂಬುದು. ನಿಜ ನಮಗೆಲ್ಲ ಪ್ರತಿ ಚುನಾವಣೆಗಳಲ್ಲೂ ನಮ್ಮ ಕಣ್ಮುಂದೆ ಬಂದು ನಿಲ್ಲುವ ಬಾರಿ ಪ್ರಶ್ನೆ ಇದೊಂದೆ, ಯಾರನ್ನು ಚುನಾಯಿಸಬೇಕು.. ಯಾವ ಪಕ್ಷವನ್ನು ನಾನು ಬೆಂಬಲಿಸಬೇಕು ..   ಯಾವ ವ್ಯಕ್ತಿ ನಮ್ಮ ಸಮಸ್ಯಗಳಿಗೆ  ಲೊಕಸಬೆಯಲ್ಲಿ ದ್ವನಿಯಾಗುತ್ತಾನೆ  ?? ಯಾರು ನಮ್ಮೆಲ್ಲರನು ಒಟ್ಟಾಗಿ ತೆಗೆದುಕೊಂಡು ನಮ್ಮ ಸಮಸ್ಯೆಗಳಿಗೆ ಮತ್ತು ಭಾವನೆಗಳಿಗೆ ಸ್ಪಂದಿಸುತ್ತಾರೆ  ???  . ... 

               ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಹಾಗು ನಮ್ಮ ರಾಜ್ಯದಲ್ಲಿ ಅನೇಕ ಪಕ್ಷಗಳಿವೆ. ಎಲ್ಲ ಪಕ್ಷಗಳಿಗೂ ಅವುಗಳದೇ ಆದ ರಾಜಕೀಯ ನಿಲುವುಗಳಿವೆ , ರಾಜಕೀಯ  ಸಿದ್ದಾಂತಗಳಿವೆ , ಅವುಗಳದೇ ಆದ ನೆಲೆಗಟ್ಟುಗಳಿವೆ . ಈ ರಾಜಕೀಯ ಪಕ್ಷಗಳು ಎಲ್ಲಾ  ಚುನಾವಣೆಗಳಲ್ಲೂ ಅದೇ ಸಿದ್ದಾಂತಗಳ ಮೇಲೆಯೇ ತಮ್ಮ  ಹೋರಾಟವನ್ನು ನಿರ್ದರಿಸುತ್ತವೆ. ನಿಜ ಹೇಳಬೇಕೆಂದರೆ ಎಲ್ಲಾ  ರಾಜಕೀಯ ಪಕ್ಷಗಳ ಹುಟ್ಟು ಕೂಡ ಒಂದು ವಿಷಯಾಧಾರಿತ  ಹೋರಾಟದ ತಳಹದಿ ಹೊಂದಿರುತ್ತವೆ. ಆ ಹೋರಾಟವು ಯಾವ ರೀತಿಯದಾಗಿದೆ, ಯಾವ ವಿಷಯದ ಮೇಲಿತ್ತು  ಎನ್ನುವುದರ ಮೇಲೆ ಅಲ್ಲಿ ಉಗಮವಾದ ಪಕ್ಷದ  ಸಿದ್ದಾಂತ ಹಾಗು ನಿಲುವುಗಳು ನಿರ್ಧಾರಿತವಾಗಿರುತ್ತವೆ. ಈಗಿರುವ ನಮ್ಮ ಅನೇಕ ರಾಜಕೀಯ ಪಕ್ಷಗಳ ಸಿದ್ದಾಂತಗಳು ಕೂಡ ಅದೇ ರೀತಿಯ ನಿಲುವುಗಳನ್ನು ಹೊಂದಿವೆ. ಈಗಲೂ ಆ ಪಕ್ಷಗಳು ಆ ಎಲ್ಲಾ ನಿಲುವುಗಳನ್ನೇ ಸಮರ್ಥಿಸಿಕೊಲ್ಲುತ್ತವೆ. ಆದರೆ ನನಗೆ ಕಾಡುವ ಪ್ರಶ್ನೆಯೆಂದರೆ , ಆ ನಿಲುವು , ಹೋರಾಟ ಹಾಗು ಸಿದ್ದಾಂತಗಳು ಈ ಕಾಲಕ್ಕೆ ಸಮಂಜಸವಾದವುಗಳೆ  (relavent) ??? .  ನಾ ಒಪ್ಪಿಕೊಳ್ತೀನಿ ಆ ಪಕ್ಷಗಳು ಹುಟ್ಟಿಕೊಂಡಾಗ ಅವೆಲ್ಲವೂ ಆ ಸಮಯದಲ್ಲಿ relavent ಆದರೆ ಈಗ ??? ಈಗಲೂ ಆ ಪಕ್ಷಗಳು ಈ ಸಮಯಕ್ಕೆ ಬದಲಾಗದಿದ್ದರೆ , ಈ ಸಮಯದಲ್ಲಿ ಇರುವಂಥಹ ಸಮಸ್ಯೆಗಳು , ವಿಷಯಗಳ ಮೇಲೆ ತಮ್ಮ ನಿಲುವನ್ನು ಬದಲಿಸದೆ ಅವೇ ಹಳೆಯ ನಿಲುವುಗಳ ಮೇಲೆ ಚುನಾವಣೆಗೆ ಸ್ಪರ್ದಿಸುವ , ಅದೇ ಸಿದ್ದಾಂತಗಳನ್ನು ಒಪ್ಪಿಕೊಳ್ಳುವ ಈಗಿನ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿದರೆ ನಾ ಅದೇಗೆ ಆ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳಲಿ ???  ಚುನಾವಣೆಗಳು , ಹೋರಾಟಗಳು ನಡೆಯಬೇಕಾದದ್ದು ಸಮಸ್ಯೆಗಳ ಮೇಲೆ , ದೇಶದ ಅಬಿವೃದ್ದಿಯ ಯೋಜನೆಗಳ ಮೇಲೆ  ಆದರೆ ನಮ್ಮ ದುರಾದೃಷ್ಟ ನಮ್ಮ ಚುನಾವಣೆಗಳು ಈಗ ನೆಡೆಯುತ್ತಿರುವುದು ಜಾತಿ , ಹಣ , ಧರ್ಮ ಮತ್ತು ತಮ್ಮ ಹಳೆಯ ಸಿದ್ದಾಂತಗಳ ಮೇಲೆ. ಇಂತಹ ಸಮಯದಲ್ಲಿ ನಾನು ಅತೀ ಜಾಗರೂಕತೆಯಿಂದ ನನ್ನ ನಾಯಕನ್ನನ್ನು ಆರಿಸಬೇಕಾಗಿದೆ.  


                ಆದರೆ ನಿಜವಾಗಿ ನನ್ನನ್ನು ಕಾಡುತ್ತಿರುವ  ಒಂದು ಮುಖ್ಯವಾದ ಪ್ರಶ್ನೆಯೆಂದರೆ ಈ ಕಾಲಕ್ಕೆ ಹೊಂದಿಕೊಳ್ಳುವ ಸಿದ್ದಾಂತಗಳು, ಈಗಿನ ನಮ್ಮ ಸಮಸ್ಯಗಳ ಪರವಾಗಿ ಪ್ರಥಿದ್ವನಿಸುವ ರಾಜಕೀಯ ಪಕ್ಷಗಳು ಎಷ್ಟು ಇವೆ ??? ಅಂಥಹ ಪಕ್ಷ ಇದ್ದರೂ , ಒಳ್ಳೆಯ ಸಮರ್ಥ , ನಿಷ್ಕಲ್ಮಶ , ಜಾತಿ ಧರ್ಮಗಳನ್ನು ಮೀರಿ ನಡೆಯುವ ಅರ್ಹ ವ್ಯಕ್ತಿಯನ್ನು ಚುನಾವಣೆಗೆ ಆ ಪಕ್ಷ ನಿಲ್ಲಿಸುವರೆ ??? ಅಂಥಹ ಅರ್ಹ ವ್ಯಕ್ತಿ ನಿಜವಾಗಿಯೂ ಹೋರಾಟದ ಹಾದಿಯಲ್ಲಿ ಬಂದವನೇ ಅಥವಾ ವ್ಯಾಪಾರ ಮನೋಭಾವದಿಂದ ರಾಜಕೀಯಕ್ಕೆ ಕಾಲಿಟ್ಟವನೇ ?? ಆ ವ್ಯಕ್ತಿ ಪ್ರಾಮಾಣಿಕವಾಗಿ ನನ್ನ ಸಮಸ್ಯೆಗಳಿಗೆ ಲೋಕಸಬೆಯಲ್ಲಿ ದ್ವನಿಯಾಗುವನೆ ??? ಇದನ್ನೆಲ್ಲಾ ನಾ ಯೋಚಿಸಲೇಬೇಕು, ಪ್ರಮಾಣ ಮಾಡಿ ಹೇಳುತ್ತೇನೆ ನನ್ನ ನೆಚ್ಚಿನ ಪಕ್ಷವೇ ಸಮರ್ಥ , ಅರ್ಹ ವ್ಯಕ್ತಿಯನ್ನು ಚುನಾವಣ ಕಣಕ್ಕೆ ಇಳಿಸದೆ , ಯಾರೋ ಸ್ಥಳೀಯ ರೌಡಿಯನ್ನೋ , ಪುಡಾರಿಯನ್ನೋ , ಜಾತಿವಾರು ಆಧಾರದ ಮೇಲೆ ಅಭ್ಯರ್ಥಿಯನ್ನು ನನ್ನ ಕ್ಷೇತ್ರದಲ್ಲಿ ನಿಲ್ಲಿಸಿದರೆ ,  ನಾ ನಿಜವಾಗಿಯೂ ಆ ಪಕ್ಷವನ್ನು , ಆ ವ್ಯಕ್ತಿಯನ್ನು ಬೆಂಬಲಿಸುವುದಿಲ್ಲ .  

               ನನಗೆ ನನ್ನ ಸ್ಥಳೀಯ ಸಮಸ್ಯಗಳು ಮುಖ್ಯ , ಸ್ಥಳೀಯ ಸಮಸ್ಯೆಗಳು ಪರಿಹಾರವಾದರೆ ಮಾತ್ರ ದೇಶದ ಏಳಿಗೆ ಸಾದ್ಯ. ನನಗೆ ನನ್ನ ಕ್ಷೇತ್ರದ ಮುಖ್ಯ , ನಾ ಇಲ್ಲಿ ಒಳ್ಳೆಯ ವ್ಯಕ್ತಿಯನ್ನು ಚುನಾಯಿಸಿದರೆ ಮಾತ್ರ  ಆ ವ್ಯಕ್ತಿ ಒಳ್ಳೆಯ ಪ್ರದಾನಿಯನ್ನು ಚುನಾಯಿಸುತ್ತಾನೆ. ದೆಹೆಲಿಯಲ್ಲಿರುವ ಒಬ್ಬ ವ್ಯಕ್ತಿಯನ್ನು ನೋಡಿ ನಾ ಇಲ್ಲಿ ಮತ ಚಲಾಯಿಸುವುದು ಅದೆಷ್ಟು ಸರಿ ?  ಎನ್ನುವುದು ನನ್ನ ನಂಬಿಕೆ. ನಿಜವಾಗಿಯೂ ನಾನು ಈ ಭಾರಿ ಜಾತಿ , ಧರ್ಮ ಹಾಗು ಕುರುಡು ಪ್ರೀತಿಯಾದರದ ಮೇಲೆ ಯಾವ ಪ್ರಮುಖ ಪಕ್ಷವನ್ನು ಬೆಂಬಲಿಸುವುದಿಲ್ಲ. ನನಗೆ ಈ ಭಾರಿ ಜನಪ್ರಿಯ ಪಕ್ಷಗಳಿಗಿಂತ ಒಳ್ಳೆಯ ಅಭ್ಯರ್ಥಿ ಮುಖ್ಯ ನನ್ನ ಕ್ಷೇತ್ರದಲ್ಲಿ .  ಯಾವ ರಾಜಕೀಯ ಪಕ್ಷವು ಒಂದು ಧರ್ಮವನ್ನು ಉಳಿಸಲು , ಬೆಳೆಸಲು ಸಮರ್ಥವಲ್ಲ , ಧರ್ಮಗಳು ಜಾತಿಗಳು ಯಾವ ಪಕ್ಷಗಳ ಆಸ್ತಿಗಳೂ  ಅಲ್ಲ. ಚುನಾವಣೆಗಳು ಸಮಸ್ಯೆಗಳ ಮೇಲೆ, ಯೋಜನೆಗಳ ಮೇಲೆ , ದೇಶದ ಹಿತಾಸಕ್ತಿಗಳ ಮೇಲೆ ನಡೆಯಬೇಕು ಹೊರತು ಧರ್ಮ , ಹಣ ಮತ್ತು ಹಗೆತನದ ಮೇಲೆ ಅಲ್ಲ.  ದುರಾದೃಷ್ಟವಶಾತ್  ನಮ್ಮ ನೆಚ್ಚಿನ ಪಕ್ಷಗಳು , ಅನೇಕ ಪ್ರಮುಖ ಪಕ್ಷಗಳು ಅದೇ ಹಳೆಯ ಸಿದ್ದಾಂತಗಳ ಮೇಲೆ , ಜಾತಿಗಳ ಮೇಲೆ , ಧರ್ಮಗಳ ಮೇಲೆ ಮುನ್ನೆಡೆಯುತ್ತಿವೆ. ಇಂತವರನ್ನು ಬೆಂಬಲಿಸುವುದಕ್ಕೆ ನನಗಂತು  ಹೇಸಿಗೆ ಆಗುತ್ತಿದೆ,,, ನಿಮಗೆ ??? .
               
              ಭ್ರಷ್ಟಾಚಾರದ ವಿರುದ್ದ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳದ  ಯಾವ ಪಕ್ಷವನ್ನು ನಾನು ಬೆಂಬಲಿಸುವುದಿಲ್ಲ.  ಸ್ವತಂತ್ರ ಬಂದು ಇಷ್ಟು ದಿನವಾದರೂ ಇನ್ನೂ  ಬಡತನ , ನೀರು , ಆಹಾರಗಳು ಒಂದು ಪಕ್ಷದ ಹೋರಾಟವಾದರೆ , ಧರ್ಮ , ಜಾತಿ ಇನ್ನೊಂದು ಪಕ್ಷದ್ದು. ಅನೇಕ ಒಳ್ಳೆಯ ನಾಯಕರು ಆ ಪಕ್ಷಗಲ್ಲಿ ಇದ್ದರು ಅವರನ್ನು ಮೂಲೆಗುಂಪು ಮಾಡಿ ಕೆಟ್ಟವರೆ ಆ ಪಕ್ಷಗಳನ್ನು ಆಸ್ಥಿಯನ್ನಾಗಿಸಿಕೊಂಡಿದ್ದಾರೆ, ಇಂಥಹ ಪಕ್ಷಗಳು ನಿಜವಾಗಿಯೂ ನಮ್ಮ ಹಿತಾಸಕ್ತಿಯನ್ನು ಕಾಪಾಡುತ್ತವೆಯೋ ? ನಮ್ಮ ಸಮಸ್ಯಗಳಿಗೆ ದ್ವನಿಯಾಗುತ್ತವೆಯೊ ?? ನಮ್ಮ ನಿಜವಾದ ಹೋರಾಟಕ್ಕೆ ದಾರಿ ತೋರಿಸುತ್ತವೆಯೋ ?? ... ಕೇವಲ ಒಂದಿಬ್ಬರು ಸಮರ್ಥ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ದೇಶದ ಜನರಿಗೆ ಮಂಕುಬೂದಿ ಎರೆಚುವ ಪಕ್ಷಗಳನ್ನು ನಾನು ತಿರಸ್ಕರಿಸಬೇಕಾಗಿದೆ. ಸಾಮಾಜಿಕ ಸುದ್ದಿ ತಾಣಗಳಲ್ಲಿ ಒಳ್ಳೆಯ ನಾಯಕರುಗಳ ಬಗ್ಗೆ ಕೆಟ್ಟದ್ದಾಗಿ ಪ್ರಚಾರ ಮಾಡುವ ಅನೇಕ ಪಕ್ಷಗಳನ್ನು ನಾನು ಜಾಡಿಸಬೇಕಾಗಿದೆ. ಇದು ಈ ಭಾರಿಯ  ಚುನಾವಣೆಗೆ ನಾನು ಮಾಡಿಕೊಂಡಿರುವ ಒಂದು ಸಿದ್ದತೆ. ಈ ಬಾರಿ  ನಮ್ಮ ಪ್ರಮುಖ  ಪಕ್ಷಗಳು ನನಗೆ ಮೋಸ ಮಾಡಲು ಸಾದ್ಯವಿಲ್ಲ , ಒಳ್ಳೆಯ ವ್ಯಕ್ತಿ ನನ್ನ ನಾಯಕ , ಒಳ್ಳೆಯ ಪಕ್ಷ  ಒಳ್ಳೆಯ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿದರೆ ಮಾತ್ರ ನನ್ನ ಅಮೂಲ್ಯ ಮತ ಆ ಪಕ್ಷಕ್ಕೆ  ಇಲ್ಲದಿದ್ದರೆ ಇಲ್ಲ , ಪಕ್ಷವನ್ನು ಪ್ರೀತಿಸಿದರು ಒಳ್ಳೆಯ ವ್ಯಕ್ತಿ ನನಗೆ ಮುಖ್ಯ ಇಲ್ಲವಾದರೆ ಇಲ್ಲ.  ಪ್ರತಿ ಕ್ಷೇತ್ರದಿಂದಲೂ ಒಳ್ಳೆಯ ವ್ಯಕ್ತಿ ಆರಿಸಿ ಬಂದರೆ ಮಾತ್ರ ಸದೃಡ ದೇಶ ಕಟ್ಟಲು ಸಾದ್ಯ , ಕೇವಲ ಒಬ್ಬ ವ್ಯಕ್ತಿಯಿಂದ ಏನು ಸಾದ್ಯವಿಲ್ಲ. ಸಾಮೂಹಿಕ ಸಮರ್ಥ ನಾಯಕರಿಂದ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಹಾಗಾಗಿ ನಾವು ಕೇವಲ ಒಬ್ಬ ನಾಯಕನನ್ನು ಚುನಾಯಿಸುವುದರ ಬದಲು ಅನೇಕ ನಾಯಕರನ್ನು ಚುನಾಯಿಸಬೇಕು.  ಯಾವ ಪಕ್ಷದಲ್ಲಿ ಸಭ್ಯ ವ್ಯಕ್ತಿ ಇರುವನೋ ಆತನನ್ನು ನಾನು ಬೆಂಬಲಿಸುತ್ತೇನೆ , ಕೇವಲ ಪಕ್ಷದ ಆಧಾರದ ಮೇಲೆ ನಾನು ಯಾವ ಕೆಟ್ಟ ವ್ಯಕ್ತಿಯನ್ನು ನನ್ನ ನಾಯಕನನ್ನಾಗಿ ಒಪ್ಪಿಕೊಳ್ಳುವುದಿಲ್ಲ. 


ನಿಮಗಾಗಿ 
ನಿರಂಜನ್ 

ಭಾವನೆಗಳು


ಹೃದಯ ದಡ 

 ಡಡಿ ನಿಂತ ಹೃದಯ
 ದಡಕ್ಕೆ
 ಹರಿವ ನಿನ್ನ ಪ್ರೀತಿ
 ನದಿಯ
 ನರಿಗೆಯಂತ  ಒಲವಿನಲೆ
 ಬಂದು ನನ್ನ ತಬ್ಬಿತು .....   

ನಗೆಯಾಲು 

ಲವಿನ ಮಾತುಗಳಿಗೆ
ನಗೆಯಾಲಿನ
ಅಮೃತವ ಸೇರಿಸಿ ನೀಡುವೆ ನೀ
ನನಗೆ ಪ್ರತಿದಿನ
ಅದು ಬಲು ಚೆನ್ನ  ...

ಮರೆಯೋಲ್ಲ 

ಪ್ರಿಯ ಅದೇಗೆ
ನಾ ಮರೆಯಲಿ ನಿನ್ನ ,
ಮರೆತರು ಮರೆಯದು
ಈ ಹೃದಯ
ಅನುದಿನವು ಚಿನ್ನ  ...

ನಿಜ ಸ್ಪೂರ್ತಿ 

ಅಂಚಿಗೆ ಸರಿದಿತ್ತು
ಆ ನನ್ನ ಅಧಮ್ಯ
ಸ್ಪೂರ್ತಿ ....

ಕಣ್ಣಂಚಿನಲ್ಲೇ ಮತ್ತೆ
ನೀ ಹೊತ್ತುತಂದೆ
ಪೂರ್ತಿ  ....

      ಉತ್ತರ ....

ನ್ನೊಲವಿನ  ತೀರದ
ಹಕ್ಕಿ ನೀ  ...
ನೀ ಹಾರಿದೊಷ್ಟು
ಎತ್ತರ ..
ಸಿಗುವುದೆನ್ನ ಪ್ರೀತಿಗೆ
ಉತ್ತರ ..

ಮಿಂಚು 

ಮೊದುವೆಗು ಮೊದಲು
ನನ್ನವಳು
ಮಿಂಚು .....
ನಂತರ
ಗುಡುಗು-ಸಿಡಿಲು ....

ಆ ತೀರ 

ಪ್ರೀತಿಯಲಿ ನಾ
ತೇಲ ಬಯಸಿದಾಗ

ಹುಣ್ಣಿಮೆಯ  ಚಂದ್ರನಡಿಯಲ್ಲಿ
ಒಲುಮೆ ದೋಣಿಯಲೆನ್ನ ಕೂರಿಸಿ

ನಿಜಪ್ರೀತಿಯಲಿ ನೀ ನನ್ನ ಈ ದಡಕ್ಕೆ
ತೇಲಿಸಿ , ನೀ ಅಲ್ಲೇ ಬೆಳದಿಂಗಾಳಾಗಿ  ಉಳಿದೆ ....

ಪ್ರೀತಿಯಾಕಾಶ 

ನಾ ಹೇಳಿದೆ ನನ್ನ
ಪ್ರೀತಿ
ಆಕಾಶದೊಷ್ಟು ವಿಸ್ತಾರ ಎಂದು ...

ನಿರೂಪಿಸಿದೆ ನೀ
ಅದನ್ನೇ
ನನ್ನ ಪ್ರೀತಿಯಾಕಾಶದಲಿ
ಕ್ಷಣಮಾತ್ರ ಮಿಂಚಿ ಮರೆಯಾಗಿ ...  ;)

ಪ್ರೀತಿಯ ಗೋಪುರ
ಮೀರದಿರಲಿ ನಿಮ್ಮೆತ್ತರ
ನೋವಾಗಬಾರದಲ್ಲವೇ ಮೇಲಿಂದ ಬಿದ್ದರ .....

 ಪ್ರೇಮ ಬೆಳೆ 

 ಳೆಗಿಳಿಯುವ ಈ ಮಳೆ ಹನಿಗಳು
 ಗಲ್ಲುಗಲ್ಲೆನ್ನುವ ನಿನ್ನ  ಬಳೆ ಸದ್ದುಗಳು
 ಮೋಹಿಸುವ ನಿನ್ನ ಮುಖ ಕಳೆ, ಕಂಗಳು
 ಹೃದಯದಲ್ಲಿ ಹಾಗೆ ಮೊಳೆತಿವೆ ಪ್ರೇಮ ಬೆಳೆಗಳು .....

 ಕಾಣುತಿರು 

ಕಾಡದಿರು ಕನಸಲಿ ಕಣ್ಣುಮುಚ್ಚಿದಾಕ್ಷಣ
ಕಾಣದಿದ್ದರು ನೀ ಕನಸಲೂ ಅರೆ ಕ್ಷಣ
ಕೈಜಾರುವುದು ನನ್ನ ಜೀವ ಅದೇ ಕ್ಷಣ ....



ನಿಮಗಾಗಿ 
ನಿರಂಜನ್ 

ಸೋಮವಾರ, ಜನವರಿ 6, 2014

ನಮ್ಮ ಜೀವದಡ



ಪ್ರೀತಿಯ ಸ್ನೇಹಿತರೆ ಹೊಸ ವರುಷದ ಶುಭಾಶಯಗಳು. ಕಳೆದ ವರ್ಷದ ಕಹಿಗಳು  ಕಾಣಿಯಾಗಲಿ , ಸಿಹಿ ಮಾತ್ರ ಈ ವರುಷಕ್ಕೆ ಸವಿಯಲು ಸಿಗಲಿ. ಕಳೆದವರ್ಷದ ಅಂತ್ಯ ನನಗಂತೂ ತುಂಬಾ ಆನಂದದಾಯಕವು , ಫಲಪ್ರದವು ಹಾಗು ಸಿಹಿಯಾಗಿಯೂ  ಇತ್ತು , ಈ ಹೊಸ ವರುಷದ ಆದಿಯು   ಅಷ್ಟೇ ಚೆನ್ನಾಗಿ ಇದೆ. ಇದಕ್ಕೆಲ್ಲ ಕಾರಣವೂ ಈಗಾಗಲೇ ನಿಮಗೆಲ್ಲ ಗೊತ್ತಿರಬಹುದು ಕೂಡ.  ನಿಜ ನನ್ನ ಖುಶಿಗಳಿಗೆಲ್ಲ ಕಾರಣ ನನ್ನವಳು....
 
               ಇತ್ತೀಚಿಗೆ ನನ್ನವಳ ಮೇಲೆ ಪ್ರೀತಿಯುಕ್ಕಿ ನಾ ಒಂದು ಕವನ ಗೀಚಿದೆ , ಅದನ್ನು ನಾ ಅವಳ ಮುಂದೆ ಶೃಂಗಾರ ಲಹರಿಯಲ್ಲೇ  ವಾಚನವನ್ನೂ ಮಾಡಿದೆ , ನನ್ನವಳು ಸಕತ್ ಖುಷಿ ಪಟ್ಟಳು , ಸಿಹಿ ನಗೆ ಬೀರಿದಳು , ನಾಚಿ ನೀರಾದಳು ಕೂಡ. ಕೆಲ ಕ್ಷಣ ಬಹು ಸಂತೋಷದಿಂದ ಕುಣಿದು ಕುಪ್ಪಳಿಸಿದ ಅವಳು , ಒಂದು ಕ್ಷಣ ಸುಮ್ಮನಾಗಿ "ರೀ... ನಿಜವಾಗಿಯೂ ನೀವು ನನ್ನನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಇದನ್ನ ಬರೆದಿರಾ ??? " ಎಂದಳು . ನಾ ಅದಕ್ಕೆ " ಹೌದು " ಎಂದಾಗ  ಅವಳ ಮುಖಭಾವ ಮತ್ತೊಂದು ಕವನಕ್ಕೆ ಸ್ಪೂರ್ತಿಯೂ ಆಯಿತು. ಮರು ಕ್ಷಣವೇ ಅವಳು ನಾ ಗಲಿಬಿಲಿಯಾಗುವ ಮತ್ತೊಂದು ಪ್ರಶ್ನೆ ಹಾಕಿದಳು " ನಿಜ ಹೇಳಿ ಯಾವ ಹುಡುಗಿ ಮೇಲೆ ಈ ಕವನ ಬರೆದ್ರಿ ,, ??? ನಾ ಅಂತು ನೀವು ಹೇಳಿದ ಹಾಗೆ ಇಲ್ಲ , ನನ್ನ ಮೇಲೆ ನೀವು ಈ ರೀತಿ ಕವನ ಬರೆದಿರೋದು  ಡೌಟ್  ;) " ಎಂದಳು... ನನಗೋ ಏನು ಹೇಳಬೇಕೋ ತೋಚಲಿಲ್ಲ .. ಅವಳ ಮೇಲೆ ನಾ ಬರೆದ ಸಾಲುಗಳು ಈ ಕೆಳಗಿನವುಗಳಾಗಿದ್ದವು ಅಷ್ಟೇ ..... 


                                            ಒಡೆಯನು  ನಾ ನನ್ನವಳ ಹೃದಯ
                                            ಪ್ರೀತಿಗಳ....

                                            ತಡೆಯನು ನಾ ಉತ್ತರವಾಗರಿಯುವ
                                            ಭಾವನೆಗಳ..

                                            ಜಿನುಗುತ್ತಿವೆ ನಮ್ಮಿಬ್ಬರ ಮನಸ್ಸುಗಳು
                                            ಹಂಬಲಗಳ..

                                            ಜೇನರಿದಂತೆ ಆಕೆ ನನ್ನೊಡೆ ಆಡಿದರೆ
                                            ಮಾತುಗಳ..

                                            ಒಲವಿನೋಲಗದಲ್ಲಿ ನೋಡಿ ನಾಚುವೆ
                                            ನಾ ನನ್ನವಳ..

                                            ಪ್ರೀತಿಯುತ್ಸವದಲ್ಲಿ ಮರೆಸುವಳು ಪ್ರತಿ
                                            ದಿನಗಳ..

                                            ಅವಳ ಆ ಸಿಹಿ ಕಿರುನಗೆ ಬೆಸೆಯುವುದು
                                            ಹೃದಯಗಳ..

                                            ಸಾಮಿಪ್ಯವ ಬಯಸುವುದು ನನ್ನ ಹೃದಯ
                                            ನನ್ನವಳ...

                                            ಸಾಂಗತ್ಯದಿ ಜೀವದಡ ಸೇರಿ ಕಟ್ಟಬೇಕವಳ
                                            ಕನಸುಗಳ..

ನಿಮಗಾಗಿ 
ನಿರಂಜನ್