ಶುಕ್ರವಾರ, ನವೆಂಬರ್ 22, 2013

Hate mistakes not the parson ....

 

                                                     Hate mistakes not the person ....

" The Supreme Court on Wednesday accepted former Army Chief VK Singh’s unconditional apology withdrawing his comments questioning a judicial verdict on his age row controversy and dropped the contempt proceedings against him " .....

ಸ್ನೇಹಿತರೆ ...

ಕೆಲವು ದಿನಗಳಿಂದ , ದಿನಗಳೇನು ಕೆಲ ವರ್ಷಗಳಿಂದ ನಮ್ಮ VK .ಸಿಂಗ್ ಮೇಲಿಂದ ಮೇಲೆ ಸುದ್ದಿಯಲ್ಲಿದ್ದಾರೆ. ಇವರು  ನಮ್ಮ  ದೇಶದ ಭೂಸೇನಾ ಮುಖ್ಯಸ್ಥರಾಗಿದ್ದಾಗ ತಮ್ಮ ಜನ್ಮದಿನದ ಸಂಬಂಧವಾಗಿ, ಕೇಂದ್ರ ಸರ್ಕಾರದ ವಿರುದ್ದವೇ ನ್ಯಾಯಲಯದಲ್ಲಿ  ಹೋರಾಡಿದ್ದರು .  ಸೇನೆಯಲ್ಲಿ ಅಧಿಕಾರದಲಿದ್ದು , ಸರ್ಕಾರವನ್ನೇ  ಕೋರ್ಟ್ ಖಟಖಟೆ ಏರಿಸಿದ್ದ ಮೊದಲ ಅಧಿಕಾರಿಯೆಂಬ ಕುಖ್ಯಾತಿಯನ್ನೂ ಸಹ ಇವರು ಪಡೆದಿದ್ದರು. ನಂತರ ನಿವೃತ್ತರಾದಾಗ ಅಣ್ಣ ಹಜಾರೆಯವರೊಂದಿಗೆ ಬ್ರಷ್ಟಾಚಾರ ವಿರೋದಿ ಆಂದೋಲನದಲ್ಲಿ ಭಾಗಿಯಾಗಿ ಜನರಿಂದ  ಸೈ ಕೂಡ ಎನಿಸಿಕೊಂಡಿದ್ದರು , ಮೊನ್ನೆ ಇವರ ಮೇಲೆಯೇ   ಅಧಿಕಾರಾವದಿಯಲ್ಲಿ ಹಣ ದುರುಪಯೋಗ ಮಾಡಿದ ಆರೋಪವನ್ನು ನಮ್ಮ ಕಾಂಗ್ರೆಸ್ ಘನ ಸರ್ಕಾರ ಆಗ ಮಾಡದಿದ್ದರೂ ಈಗ ಮಾಡಿದೆ. ಅದೇನೇ ಇರಲಿ ಇವರ ಮೇಲೆ ಅನೇಕರ ಕೆಂಗಣ್ಣುಗಳಂತೂ ಇವೆ,  ಅದಕ್ಕೆ ಅನೇಕ ರಾಜಕೀಯ ಕಾರಣಗಳೂ ಕೂಡ ಇವೆ. ಇಂಥವರು ತಮ್ಮ ಜನ್ಮದಿನದ ಕುರಿತಾಗಿ ದೇಶದ ಉಚ್ಚನ್ಯಾಯಾಲಯ ಕೊಟ್ಟ ತೀರ್ಪಿನ ಬಗ್ಗೆ ಮಾತಾಡುತ್ತ , ತರಾತುರಿಯಲ್ಲಿ ನ್ಯಾಯಾಂಗ ನಿಂದನೆಯನ್ನು  ಕೂಡ ಮಾಡಿದರು , ನ್ಯಾಯಾಲಯದ ಕೆಂಗಣ್ಣಿಗೂ ಗುರಿಯಾದರು .  ದೇಶದ ಅತ್ಯುನ್ನತ್ತ ಅಧಿಕಾರದಲಿದ್ದ ,  ತಿಳುವಳಿಕೆ ಇರುವಂಥಹ ವ್ಯಕ್ತಿಯೇ  ಈ ರೀತಿಯಾಗಿ ನ್ಯಾಯಾಂಗ ನಿಂದನೆ ಮಾಡಿರುವುದನ್ನು ಖಂಡಿಸಿ ಸುಪ್ರೀಂ ಕೋರ್ಟ್ ಇವರನ್ನು ತೀವ್ರ ತರಾಟೆಗೂ ತೆಗೆದುಕೊಂಡಿತ್ತು. ಇದನ್ನು ಅನೇಕರು , ಜನ ಸಾಮಾನ್ಯರು ಖಂಡಿಸಿದ್ದರು.  ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಆರೋಪದ ಮೇಲೆ ಇವರ ಮೇಲೆ  ಕ್ರಮ ಜರುಗಿಸಲು ಆದೇಶವನ್ನು ಸಹ ಮಾಡಿತ್ತು. ಹಾಗಾಗಿ ಕೋರ್ಟ್ VK ಸಿಂಗ್ ರ ಸಮಜಾಯಿಷಿ ಕೂಡ ಕೇಳಿತ್ತು. ತಕ್ಷಣಕ್ಕೆ ತಮ್ಮ ಅಚಾತುರ್ಯದಿಂದ ಆದ ತಪ್ಪನ್ನು  ಅರಿತ  VK ಸಿಂಗ್  ಸುಪ್ರೀಂ ಕೋರ್ಟ್ ಗೆ  ತಮ್ಮ ಬೇಷರತ್ ಕ್ಷಮೆ ಕೇಳಿದರು  ಹಾಗು " ತಮ್ಮ ತಪ್ಪಿನ ಅರಿವಾಗಿದೆ ನಾನೆಂದು ಮುಂದೆ  ಈ ರೀತಿಯ ತಪ್ಪು ಮಾಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ನ್ಯಾಯಾದೀಶರ ಮುಂದೆ  ಸಮಜಾಯಿಷಿ ಕೂಡ ಕೊಟ್ಟರು. ಹಾಗ  ಇವೆಲ್ಲವನ್ನೂ  ಅಳೆದು ತೂಗಿ  ಅಂಥಹ ಸುಪ್ರೀಂ ಕೋರ್ಟ್  ಅವರನ್ನು ಆ ಕ್ಷಣದಲ್ಲೇ  ಕ್ಷಮಿಸಿದೆ ಮತ್ತು ಕ್ರಮ ಜರುಗಿಸುವುದನ್ನು ಆ ಕ್ಷಣಕ್ಕೆ ನಿಲ್ಲಿಸಿದೆ.
 
 
                   ಇದನೆಲ್ಲ ಇವ ಇಲ್ಲಿ ಯಾವ ಕಾರಣಕ್ಕಾಗಿ  ಹೇಳುತ್ತಿದ್ದಾನೆ ಎಂದು ನಿಮಗೆ ಅನ್ನಿಸುತ್ತಿರಬಹುದು . ಕಾರಣ ಇದೆ ಸ್ನೇಹಿತರೆ .  VK .ಸಿಂಗ್ ಏನು ಸಾಮಾನ್ಯ ವ್ಯಕ್ತಿಯಲ್ಲ , ವಿದ್ಯಾವಂತರು , ಬುದ್ದಿವಂತರು , ಸಮರ್ಥ ಹಾಗು ದಕ್ಷ ಆಡಳಿತಗಾರ. ಅನೇಕರೊಂದಿಗೆ , ಅನೇಕ ವಿಷಯಗಳಲ್ಲಿ , ಅನೇಕ ಕ್ಲಿಷ್ಟಕರ ಪರಿಸ್ತಿಥಿಗಳನ್ನು ಎದುರಿಸಿ, ಹೋರಾಡಿದ ಅನುಭವಿಗಳು  ಕೂಡ, ವಯಸ್ಸಿನಲ್ಲೂ ಹಿರಿಯರು . ಇಂಥಹ ವ್ಯಕ್ತಿಯೇ  ಪರಿಸ್ಥಿತಿಯ ಒತ್ತಡಕ್ಕೆ ಮಣಿದು ತಪ್ಪುಗಳನ್ನು ಮಾಡಿದ್ದಾರೆ.  ಅದು ಸಾಮಾನ್ಯ ತಪ್ಪೇನು ಆಗಿರಲಿಲ್ಲ .  ನಮ್ಮ ದೇಶದ ಉನ್ನತ ನ್ಯಾಯಾಲಯವನ್ನೇ ಅವರು  ದೂಷಿಸಿದ್ದರು. ರೊಚ್ಚಿಗೆದ್ದಿದ್ದ ಕೋರ್ಟ್ ಕೂಡ ಇವರ ವಿರುದ್ದ ಕ್ರಮ ಜರುಗಿಸಲು ಮುಂದಾಗಿತ್ತು. ಆದರೂ  VK .ಸಿಂಗ್  ಕೇಳಿದ ಒಂದೇ ಒಂದು ಕ್ಷೆಮೆಯನ್ನು ಕೋರ್ಟ್ ಪುರಸ್ಕರಿಸಿ ಇವರ ತಪ್ಪನ್ನು ಮನ್ನಿಸಿತು. ಇಂಥಹ ವ್ಯಕ್ತಿಗಳು ಕೂಡ ಪರಿಸ್ಥಿತಿಯ ಒತ್ತಡಕ್ಕೆ ಮಣಿದು , ಸಮತೋಲನ ಕಳೆದುಕೊಂಡು ತಪ್ಪುಮಾಡುವಾಗ ನಮ್ಮಂಥ ಸಾಮಾನ್ಯರು ತಪ್ಪು ಎಸಗುವುದು ಮಹಾಪರಾಧವೇನಲ್ಲ.  ಆದರೆ ತಪ್ಪನ್ನು ಅರಿತ ಮೇಲೆ ಸುಮ್ಮನೆ ಕೂರದೆ ತಪ್ಪು ಸರಿ ಮಾಡಿಕೊಳ್ಳುವ ಅವಕಾಶವಿದ್ದರೆ ಆ ಕಡೆಗೆ ಗಮನ ಕೊಡಬೇಕು.ಮಾಡಿದ ತಪ್ಪನ್ನು  ಸರಿಪಡಿಸಿದರೆ  ಅದು ಅವರ ದೊಡ್ಡಗುಣ.  
 
 
                  ಎಂಥಹ ತಪ್ಪುಗಳನ್ನು ಮಾಡಿದರು ಕೂಡ , ಅರಿತು ನಾವು ಸರಿಯಾಗಿ ಆಲೋಚಿಸದರೆ ತಪ್ಪು ಸರಿದೂಗಿಸುವ ಮಾರ್ಗ ಇದ್ದೆ ಇರುತ್ತೆ. ಆ ನಿಟ್ಟಿನಲ್ಲಿ ತಪ್ಪು ಮಾಡಿದವರು ಅರಿತು ತಪ್ಪನ್ನು ಸರಿ ಮಾಡುವ ಕೆಲಸದಲ್ಲಿ ತೊಡಗಿದರೆ ನಾವು ಆ ಕೆಲಸವನ್ನು ಪುರಸ್ಕರಿಸಬೇಕು. ಮಾಡಿದ ತಪ್ಪುಗಳನ್ನೇ ಮುಂದೆಂದು ಮಾಡದಂತೆ ಎಚ್ಚರವಹಿಸಬೇಕು.  ನಮ್ಮ ದೇಶದಲ್ಲಿ ಅತ್ಯಂತ ಕ್ರೂರ ತಪ್ಪು ಮಾಡಿ ಗಲ್ಲು ಶಿಕ್ಷೆಗೆ ಒಳಪಟ್ಟಿದ್ದರೂ , ನಮ್ಮ ರಾಷ್ಟ್ರಪತಿಗಳ ಕೈಯಲ್ಲಿ ಅವರನ್ನು ಮನ್ನಿಸುವ, ಕ್ಷಮಿಸುವ  ಅಥವಾ ಶಿಕ್ಷೆಯನ್ನು ಕಡಿಮೆ ಮಾಡುವ ಅವಕಾಶವಿದೆ.  ಹೀಗಿರುವಾಗ ನಾವು ಸಾಮಾನ್ಯರು ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನೇ ಮನ್ನಿಸಲಾಗದೆ , ಕ್ಷಮಿಸಲಾಗದೆ ಮನುಷ್ಯರನ್ನು ದೂಷಿಸುತ್ತೇವೆ. ಕೆಲವೊಮ್ಮೆ ಒಬ್ಬರೊನ್ನೊಬ್ಬರು ನೋಯಿಸಿಕೊಳ್ಳುತ್ತೇವೆ .  ಮಾತು ಬಿಡುತ್ತೇವೆ, ಸಂಬದಗಳನ್ನೇ ಮುರಿದುಕೊಳ್ಳುತ್ತೇವೆ. ನಿಜವಾಗಿಯೂ ನಾವು ಈ ರೀತಿಯಾಗಿ ವರ್ತಿಸುವುದು ಸರಿಯೋ ?. ತಪ್ಪು ಮಾಡಿದಾಗ ಕ್ಷಮಾಪಣೆಯನ್ನು ಕೇಳಲು ಹಾಗು ತಪ್ಪುಗಳನ್ನು ಮನ್ನಿಸಲು ನಮ್ಮ ಅಹಂಗಳನ್ನೂ  ಅಡ್ಡ ಬರಲು ಬಿಟ್ಟುಕೊಂಡು ಸಂಬಂದಗಳನ್ನೇ ಹಾಳು ಮಾಡಿಕೊಳ್ಳುತ್ತೇವೆ, ಸ್ನೇಹವನ್ನು ಕಳೆದುಕೊಳ್ಳುತ್ತೇವೆ. ನಿಜವಾಗಿಯೂ ನಾವು ಸಣ್ಣ ಪುಟ್ಟ ತಪ್ಪುಗಳಿಗೆ  ಅಷ್ಟೊಂದು ಬಿರುಸಾಗಿ ವರ್ತಿಸುವ  ಅವಶ್ಯಕತೆ ಇದೆಯಾ ?.  ಯಾರು ಕೂಡ  ಬೇಕೆಂದೇ ತಪ್ಪುಗಳನ್ನು ಮಾಡುವುದಿಲ್ಲ , ತಪ್ಪು ಅರಿತ ಮೇಲೆಯಾದರು  ಆತ ಕ್ಷೆಮೆಯಾಚಿಸಿದರೆ ಒಳ್ಳೆಯ ಮನಸ್ಸಿನಿಂದ ಆತನನ್ನು ಕ್ಷಮಿಸಿದರೆ ನಾವು ಕಳೆದುಕೊಳ್ಳುವುದು ಏನು ??
 
 
                 ನಮ್ಮ ದೇಶದ ಸುಪ್ರಿಂ ಕೋರ್ಟ್  ಹಾಗು  ರಾಷ್ಟ್ರಪತಿಗಳೇ ಕ್ಷೆಮೆ ನೀಡುವರಂತೆ ಇನ್ನು ನಾವು ತಪ್ಪುಗಳನ್ನು  ಮನ್ನಿಸುವುದರಲ್ಲಿ ದೊಡ್ದಮಾತೆನಿದೆ. ತಪ್ಪು ಮಾಡಿದವನು ಸಣ್ಣವ , ತಪ್ಪು ಅರಿತು ಸರಿ ಮಾಡುವನು ದೊಡ್ಡವ , ತಪ್ಪುಗಳನ್ನು ಕ್ಷಮಿಸುವವನು ದೊಡ್ಡವ,  ಕ್ಷಮಿಸದಿರುವವನು ಮತ್ತೆ ಸಣ್ಣವ.  ಸಹಜವಾಗಿ ನಡೆಯುವ ತಪ್ಪುಗಳನ್ನು ಮನ್ನಿಸಬೇಕು , ನೋಡಿಯು ನೋಡದಿರಬೇಕು. ಕ್ಷಮೆಯನ್ನು ಪುರಸ್ಕರಿಸಿ ಮತ್ತೆ ಸಹಜವಾಗಿ ಬಾಳಿದರೆ ನಾವುಗಳು ಕಳೆದು ಕೊಳ್ಳುವುದು ಏನು ಇಲ್ಲ . ಈ ಅಹಂಮ್ಮುಗಳನ್ನೂ ಬಿಟ್ಟು , ಕೆಲವೊಮ್ಮೆ ಸೋತು ನೆಡೆದದ್ದೇ ಆದರೆ ನಿಜವಾಗಿಯೂ ಆರೋಗ್ಯಕರವಾದ ಜೀವನ ಮಾಡ ಬಹುದು . ಇಲ್ಲವಾದರೆ ನಾವು ಎಂದು ಸುಖಿಗಳಾಗುವುದಿಲ್ಲ. ತಪ್ಪುಗಳ ಪಶ್ಚಾತ್ತಾಪದಲ್ಲಿ ಬೇಯಬೇಕು , ಅಸಹನೆಯಲ್ಲೇ ಸಾಯುವ ತನಕ ಬೇರೆಯವರನ್ನು ದೂಷಿಸುತ್ತ ಕಾಲ ಕಳೆಯಬೇಕು. 
 
                ಸಣ್ಣ ಪುಟ್ಟ ತಪ್ಪುಗಳನ್ನು ಮರೆಯೋಣ , ಕ್ಷಮಿಸುವ ಗುಣ ಬೆಳೆಯಿಸಿಕೊಳ್ಳೋಣ , ಸಣ್ಣ ಪುಟ್ಟ ತಪ್ಪುಗಳಿಗೆ ನಮ್ಮ ಅಮೂಲ್ಯ ಸಂಬಂದಗಳು ಹಾಳಾಗದಂತೆ ಎಚ್ಚರ ವಹಿಸೋಣ , ತಪ್ಪುಗಳನ್ನು ಸರಿಪಡಿಸಿಕೊಳ್ಳಲು ದಾರಿಗಳಿದ್ದರೆ ಅವುಗಳನ್ನು ಹುಡುಕಿ , ತಪ್ಪು ಸರಿದೂಗಿಸುವ ಕೆಲಸ ಮಾಡೋಣ. ಸಣ್ಣ ಪುಟ್ಟ ತಪ್ಪಿಗಾಗಿ ಮನುಷ್ಯರನ್ನು ದೂಷಿಸುವುದನ್ನು ಆದೊಷ್ಟು ಕಡಿಮೆ ಮಾಡಿಕೊಳ್ಳೋಣ . ಇದಕ್ಕೆ ಪೂರಕವಾಗಿ  ಮಹಾತ್ಮ ಗಾಂಧಿ ಹೇಳಿದ ಮಾತಿನೊಂದಿಗೆ ಈ ಲೇಖನವನ್ನು ನಾನು ಮುಗಿಸುತ್ತೇನೆ ,     
                                               "  Hate mistakes not the person "
 
ನಿಮಗಾಗಿ 
ನಿರಂಜನ್