ಭಾನುವಾರ, ಮಾರ್ಚ್ 13, 2011

Generic Love !!!!!!!

                                      Generic Love !!!!!!

ಯೋಸಹಜ ಭಾವನೆಗಳಾದ ಪ್ರೀತಿ ಮತ್ತು ಆಕರ್ಷಣೆಗಳು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಾರಿ ಬಂದೆ ಬರುತ್ತವೆ, ಇದಕ್ಕೆ ಒಂದು ವಯಸ್ಸಿನ ಹುಡುಗ-ಹುಡುಗಿಯರ ಯೋಚನೆಗಳು , ಸ್ನೇಹಿತರು  ಹಾಗೂ ಅವರ ಸುತ್ತಮುತ್ತಲಿನ ವಾತಾವರಣವು ಕೂಡ ಇದಕ್ಕೆಲ್ಲ ಕಾರಣವಾಗುತ್ತವೆ. ಸಹಜವಾಗಿಯೇ ಬರುವ ಈ ಭಾವನೆಗಳಿಗೆ  ಹುಡುಗರಂತು ಬಹಳ ಬೇಗ ಸ್ಪಂದಿಸುತ್ತಾರೆ !. ಇಲ್ಲಿ ಹುಡುಗಿಯರ ಬಗ್ಗೆ ಸಂಪೂರ್ಣವಾಗಿ ನನಗೆ ಗೊತ್ತಿರದ ಕಾರಣ , ಹುಡುಗರ ದೃಷ್ಟಿಕೋನವನದಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ. ಎಲ್ಲರಲ್ಲೂ ಇದೆ ರೀತಿ ಆಗುತ್ತದೆ ಅಂತ ಅಲ್ಲ, ಬಹುಪಾಲು ಹುಡುಗ-ಹುಡುಗಿಯರ ಜೀವನದಲ್ಲಿ ಈ ರೀತಿ ಆಗಬಹುದು ಅಥವ ನೆಡೆದಿರಲೂಬಹುದು.

           ಪ್ರೀತಿ, ಆಕರ್ಷಣೆಗಳಿಗೆ ಬೇಗ ತುತ್ತಾಗುವ ಹುಡುಗ ನಾನು ತುಂಬಾ Bold, Strong, Not emotional and Very intelligent ಅಂತ ಅಂದುಕೊಂಡು ಒಬ್ಬ ಹುಡುಗಿಯನ್ನು ನೋಡಿ , ಅವಳ ಜೊತೆ ಸ್ನೇಹ ಸಂಪಾದಿಸಿಕೊಳ್ಳುವ ಹುಡುಗ , ತನ್ನ ಎಲ್ಲ ಭಾವನೆಗಳನ್ನು ಅವಳೊಂದಿಗೆ  ಅಂಚಿಕೊಳ್ಳಲು ಶುರು ಮಾಡುತ್ತಾನೆ . ಪಾಪ ಅವಳು ಕೂಡ ಅವನೊಂದಿಗೆ ಸಕತ್ ಸಹಜವಾಗಿ, ಸರಿಯಾಗಿಯೇ ಸ್ಪಂದಿಸುತ್ತಾಳೆ.  ಆದರೆ ಇದು ಬಹಳ ದಿನ ಹೀಗೆ ಇರಲು ಹೇಗೆ ಸಾದ್ಯ ? . ಒಂದು ದಿನ ಆ ಹುಡುಗ ಅವಳಿಗೆ ತನ್ನ ಪ್ರೀತಿಯ ಬಗ್ಗೆ ಹೇಳುತ್ತಾನೆ, ಹುಡುಗನ ಹಣೆಬರಹ ಚೆನ್ನಾಗಿದ್ದರೆ ಬರುವ ಉತ್ತರ , " I too love u  " ಇಲ್ಲ ಅಂದರೆ " U r my good friend yaar " , ಹುಡುಗಿಯರು  ಹುಡುಗರ ಪ್ರೀತಿಯನ್ನು ತಿರಸ್ಕರಿಸಲು ಹಲವು ಕಾರಣಗಳನ್ನು ಕೊಡುತ್ತಾರೆ,  ಹುಡುಗನನ್ನು  convince  ಕೂಡ ಮಾಡುವುದರಲ್ಲಿ ಅವರು ನಿಪುಣರು ಹಾಗೂ ಅದು ದೇವರು ಅವರಿಗೆ ಕೊಟ್ಟ ಬುದ್ದಿವಂತಿಕೆ ಅಥವ ವರ ಎಂಬುದು ನನ್ನ ಅಬಿಪ್ರಾಯ. 



            ಎಲ್ಲೋ ನೋಡುವ ಹುಡುಗಿಯನ್ನು ಮಾತಾಡಿಸಲೇ ಬೇಕು ಅಂದುಕೊಳ್ಳುತ್ತಿದ್ದಂತೆ , ಅಂತಹ ಅವಕಾಶಗಳು ಬಂದೆ ಬಿಡುತ್ತವೆ  , " ಏನೋ ಇದೆ ನಮ್ಮಿಬರ ನಡುವೆ" ಅದಕ್ಕೆ ಈ ಅವಕಾಶ ಸಿಕ್ಕಿದೆ ಅಂದುಕೊಳ್ಳುತ್ತಾನೆ ಆ ಹುಡುಗ.ಸಕತ್ ದೈರ್ಯ ಮಾಡಿ  ಅವಳನ್ನು ಮೊದಲ ಸಾರಿ ಮಾತನಾಡಿಸುತ್ತಾನೆ, ಪಾಪ ಆ ಹುಡುಗಿ ಕೂಡ ಸರಿಯಾಗಿಯೇ ನಗುತ್ತಾ ಸ್ಪಂದಿಸುತ್ತಾಳೆ, ಇಷ್ಟು ಸಾಕು ಹುಡುಗನಿಗೆ ತಲೆಯಲ್ಲಿ "
ಹುಳ " ಬಿಟ್ಟುಕೊಳ್ಳಲು. ಹೇಗೋ ಕಷ್ಟ ಪಟ್ಟು ಅವಳ Mail Id ಮತ್ತು Mobile number ಗಿಟ್ಟಿಸಿಕೊಂಡು, Forward mails  ಮತ್ತು messages ಕಳಿಸಲು ಶುರು ಮಾಡುತ್ತಾನೆ. ಅದಕ್ಕೆ ಹುಡುಗಿ ಸ್ಪಂದಿಸಿದರಂತು ಮುಗೀತು ಕತೆ,  ನಿಜವಾಗಿಯೂ ಆ ಹುಡುಗಿಗೂ ನನ್ನ ಮೇಲೆ ಪ್ರೀತಿ ಇರಬಹುದೆಂದು ಊಹಿಸಿ Chat ಮಾಡಲು ಶುರು ಮಾಡಿಯೇ ಬಿಡುತ್ತಾನೆ. ತನ್ನ ಪ್ರತಿಯೊಂದು ಭಾವನೆಗಳನ್ನು ಅವಳಲ್ಲಿ ಹೇಳಿಕೊಳ್ಳುತ್ತಾನೆ. ಸಂಪೂರ್ಣವಾಗಿ ತಾನು ಯಾವುದೋ ಒಂದು ಭಾವನ ಲೋಕಕ್ಕೆ ಹೋಗಿ ಬಿಡುತ್ತಾನೆ. ಅವಳೇ ನನ್ನ ಜೀವದ ಗೆಳತಿ ಎಂದು ಯೋಚಿಸುವ ಅವನು, ಸದಾ ಗೆಳತಿಯ messages  ಬರುವಿಕೆಗಾಗಿ ಕಾಯುತ್ತಾನೆ. ಮೊಬೈಲ್ ನ್ನು ಕ್ಷಣಾಕೊಮ್ಮೆ ತೆಗೆದು ತೆಗೆದು ತೆಗೆದು ನೋಡುತ್ತಾನೆ, ತನ್ನೆದುರು ಬರುವ ಎಲ್ಲರಲ್ಲೂ ತನ್ನ ಗೆಳತಿಯ ಮುಖವನ್ನೇ ಕಾಣುತ್ತಾನೆ, ಸ್ನೇಹಿತರೊಂದಿಗೆ ಮಾತು ಕಡಿಮೆ ಮಾಡುತ್ತಾನೆ, ಸದಾ ಚಟುವಟಿಕೆಯುಕ್ತನಾಗಿರುತ್ತಿದ್ದ ಆ ಹುಡುಗ ಅವನದೇ ಆದ  ಲೋಕದಲ್ಲಿ  ಇರಲು ಬಯಸುತ್ತಾನೆ. ನಿಜವಾಗಿಯೂ ಇದೆಲ್ಲ ಏನು ಆ ಹುಡುಗಿಗೆ ತಿಳಿದಿರುವುದಿಲ್ಲ. ಅವಳು ಈತ ಕಳಿಸುವ messages ಗೆ ಹಾಗೂ ಮಾಡುವ call  ಗಳಿಗೆ ನಾರ್ಮಲ್ ಆಗಿಯೇ ಸ್ಪಂದಿಸುತ್ತಾಳೆ. ಆದರೆ ಪ್ರತಿ ಬಾರಿ ಅವಳು ಕಳಿಸುವ ಸಾಮಾನ್ಯ k, hmm, gn, sd, tc, tel, bye and  :)  message ಗಳಲ್ಲಿ ಎಲ್ಲಿಲ್ಲದ ಬಾರಿ ಅರ್ಥಗಳನ್ನು ಹುಡುಕಿಕೊಂಡು  ಏನೇನೋ ಅಂದುಕೊಳ್ಳುತ್ತಲೇ ಬರುತ್ತಾನೆ ತಲೆ ಕೆಟ್ಟ ಹುಡುಗ. ಗಂಟೆ ಗಟ್ಟಲೆ ಅವಳಿಗಾಗಿ ಕಾಯುತ್ತಾನೆ, ಅವಳ GN and SD message  ಬಂದಮೇಲೆ ಮಲಗುತ್ತಾನೆ, ದಿನಕೊಮ್ಮೆಯಾದರೂ ಅವಳನ್ನು ಮಾತಾಡಿಸಬೇಕು ಎಂಬುವ ಹಂಬಲ. ಆಗಾಗ್ಗೆ ನೆಡೆಯುವ , ಅವನ ಭಾವನೆಗಳನ್ನು ಗಟ್ಟಿ ಮಾಡುವಂತಹ ಕಾಕತಾಳೀಯ ಘಟನೆಗಳು ಅವನ ತಲೆಯಲ್ಲಿದ್ದ ಒಂದು ಸಣ್ಣ ಪ್ರೀತಿಯೆಂಬ " ಹುಳ " ಅವನಿಗೆ ಗೊತ್ತಿಲ್ಲದಂತೆ ದೊಡ್ಡದಾಗಿ ಬೆಳೆದು ಬಿಟ್ಟಿರುತ್ತೆ. ಅವಳನ್ನು ಸಂಪೂರ್ಣವಾಗಿ ನಂಬುತ್ತಾನೆ ಹಾಗೂ ಜೀವಕಿಂತಲೂ  ಹೆಚ್ಚು ಪ್ರೀತಿಸಲು ಶುರು ಮಾಡಿಯೇ ಬಿಡುತ್ತಾನೆ. ಅವಳಿಲ್ಲದಿದ್ದರೆ ನನ್ನ ಜೀವನವೇ ಇಲ್ಲ, ಜೀವನ ಶೂನ್ಯ ಅಂತೆಲ್ಲಾ ಯೋಚಿಸತೊಡಗುತ್ತಾನೆ. ಹುಡುಗ ತುಂಬಾ Bold and Straight ನಡೆಯವನಾಗಿದ್ದರೆ ಈ ವಿಷಯವನ್ನು ತನ್ನ ಗೆಳತಿಯ ಬಳಿ ಹೇಳಿಯೇ ಬಿಡುತ್ತಾನೆ. ಕೆಲವರು ಆ ವಿಷಯವನ್ನು ಹೇಳದೇ ಸುಮ್ಮನಾಗಿಬಿಡುತ್ತಾರೆ, ಹೇಳಿದರೆ ಎಲ್ಲಿ ಗೆಳತಿ ನನ್ನನ್ನು ತಪ್ಪು ತಿಳಿದು, ಮಾತು ನಿಲ್ಲಿಸಿ ಬಿಟ್ಟರೆ ಎಂಬ ಭಯದಿಂದ ಹೇಳದೇ ಪ್ರೀತಿಯನ್ನು ತಮ್ಮ ಹೃದಯದಲ್ಲೇ ಹಡಗಿಸಿಟ್ಟು ಬಿಡುತ್ತಾರೆ.  ಹುಡುಗ ನೇರವಾಗಿ ಹೇಳಿದರೆ , ಹುಡುಗನ ನಸೀಬು ಚೆನ್ನಾಗಿದ್ದರೆ ಹುಡುಗಿ ಪ್ರೀತಿಯನ್ನು Accept  ಮಾಡಬಹುದು ಇಲ್ಲದಿದ್ದರೆ ಹುಡುಗ ಎಷ್ಟೇ ನೇರವಾಗಿ,  ಅವನು ಅವಳನ್ನು ಇಷ್ಟಪಡುತ್ತಿರುವ ವಿಷಯವನ್ನು ಹೇಳಿದರೆ ಅಷ್ಟೇ ನೇರವಾಗಿ ಆ ಬಹುದಿನದ ಹುಡುಗನ ಪ್ರೀತಿಯನ್ನು ಅವಳು ತಿರಸ್ಕರಿಸುತ್ತಾಳೆ.ತಿರಸ್ಕರಿಸಲು ಅವಳಿಗೆ ಬೇಕಾದಷ್ಟು ಕಾರಣಗಳು ಇರುತ್ತವೆ. ತಿರಸ್ಕರಿಸಿದರೆ ಅವಳು ಹೇಳುವ simple ಉತ್ತರಗಳೂ " U r my good friend yaar ",  " ನಿನ್ನ ಬಗ್ಗೆ ನಾ ಯಾವತ್ತೂ ಆ ರೀತಿ ಯೋಚಿಸಿಲ್ಲ ", " ನನಗೆ ತುಂಬಾ responsibilities  ಇವೆ ", " ನಾನು ನಿನಗೆ ಸರಿಯಾದ ಜೋಡಿಯಲ್ಲ ", " ನಿನ್ನ ಬಗ್ಗೆ ನನಗೆ ಆ ರೀತಿಯ ಭಾವನೆಗಳು ಎಂದಿಗೂ ಬರುವುದಿಲ್ಲ ", "U wil get a good girl yaar". ಇವುಗಳನ್ನು ಕೇಳಿದ ಹುಡುಗನಿಗೆ ಆಕಾಶವೇ  ಕಳಚಿ ಬದ್ದಂತೆ ಹಾಗಿ ಏನು ಮಾತಾಡಬೇಕೋ  ತಿಳಿಯುವುದಿಲ್ಲ. ಅವಳಿಗೆ ಪದೇ ಪದೇ ಯೋಚಿಸು, ಅರ್ಥ ಮಾಡಿಕೊ , ನಿನ್ನ ಯಾವುದೇ ಸಮಸ್ಸೆಗಳ್ಳಿದ್ದರು ನಾನು ಹೆಗಲು ಕೊಡುತ್ತೇನೆ , ನಿನ್ನ ಏನೇ Conditions ಇದ್ರು ನಾ ಅವುಗಳನ್ನು ಒಪ್ಪುತ್ತೇನೆ ಅಂತ ಅವಳಿಗೆ ಅಭಯ ಹಸ್ತ ನೀಡುತ್ತಾನೆ. ಹುಡುಗಿ ಒಮ್ಮೆ ಪ್ರೀತಿಯನ್ನು ತಿರಸ್ಕರಿಸಿದರೆ ಮುಗೀತು ಅವಳು ಮತ್ತೆ ತೀರ್ಮಾನವನ್ನು ಬದಲಾಯಿಸುವುದಿಲ್ಲ ಎಂಬ ಕಟು ಸತ್ಯ ಅವನಿಗೆ ತಿಳಿಯುವುದೇ ಇಲ್ಲ. ಅವಳು ನನ್ನನ್ನು ಪರೀಕ್ಷೆ ಮಾಡುತ್ತಾ ಇದ್ದಾಳೆ ಎಂದು ಪಾಪ ಹುಡುಗ ಪ್ರೀತಿಯ ನಿವೇದನೆಯನ್ನು ಪದೇ ಪದೇ  ಮಾಡುತ್ತಲೇ ಇರುತ್ತಾನೆ. ಇದನ್ನೆಲ್ಲ ತಾಳಲಾರದೆ ಹುಡುಗಿ ಕೊನೆಯದಾಗಿ ಹುಡುಗನಿಗೆ ಅರ್ಥ ಮಾಡಿಸಲು ಹೂಡುವ ಅಸ್ತ್ರ “ ನಾ ಈಗಾಗಲೇ ಒಬ್ಬರನ್ನು ಪ್ರೀತಿಸುತ್ತಾ ಇದ್ದೇನೆ “ . ಆಗ ಹುಡುಗ ಸ್ವಲ್ಪ ಅರ್ಥ ಮಾಡಿಕೊಂಡು ಬುದ್ದಿವಂತನಾದರೆ  ಆ ವಿಷಯ ಬಿಟ್ಟು ತನ್ನ ಕೆಲಸಗಳಲ್ಲಿ ಮಗ್ನನಾಗುತ್ತಾನೆ. ಇಲ್ಲವಾದರೆ ತನ್ನ ಜೀವನದ ಗತಿಯನ್ನೇ ಬದಲಾಯಿಸುವ ಈ ಬಲೆಯಲ್ಲಿ ಬಿದ್ದು ತುಂಬಾ ಕಷ್ಟ ಪಟ್ಟು ತನ್ನ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಾನೆ. ಕಾಲ ಕಳೆದಂತೆ ಎಂತವರನ್ನು ಮರೆಯುವುದು ಮನುಷ್ಯನ ಸಹಜ ಗುಣ, ಅದರಂತೆ ಅವನು ಅವಳನ್ನು ಮರೆಯುತ್ತಾನೆ ಬಿಡಿ. ಆದರೆ ಎಲ್ಲೋ ಒಂದು ಕಡೆ ಅವಳು ಅವನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲವೆಂಬೆ ಬೇಜಾರು ಕೊನೆಯವರೆಗೂ ಸ್ವಲ್ಪ ಇದ್ದೇ ಇರುತ್ತೆ.  ನನ್ನ ಬಗ್ಗೆ ಯಾವ ಭಾವನೆಗಳು ಇರದ ಒಬ್ಬ ಹುಡುಗಿಗೆ ನಾ ಎಷ್ಟೊಂದು ದಿನ ತಲೆಕೆಡೆಸಿಕೊಂಡೆನಲ್ಲ ಎಂಬ ಕೋಪ ಕೂಡ ತನ್ನಮೇಲೆ ಇರುತ್ತೆ.

               ಒಟ್ಟಾರೆ ಹೇಳಬೇಕೆಂದರೆ ಇದೆಲ್ಲ ಒಂದು ರೀತಿಯಲ್ಲಿ, ಭಾವನೆಗಳಿಗೆ ಹುಡುಗ ಅತವ ಹುಡುಗಿ  ಸೋತಾಗ ಆಗುವ, ವಯೊಸಹಜವಾದ ಘಟನೆಗಳು ಅಷ್ಟೇ. ಇದನ್ನೆಲ್ಲ ಅರ್ಥ ಮಾಡಿಕೊಂಡು ಅದೇ ಹುಡುಗಿಯೊಂದಿಗೆ  ಉತ್ತಮ ಸ್ನೇಹಿತನಾಗಿ ಇರುವವರು ಬಹಳಷ್ಟು ಮಂದಿ ಈಗಲೂ ಇದ್ದಾರೆ. ಕೆಲವರು ಒಳ್ಳೇ ಸ್ನೇಹಿತರಿಂದ ಸಲಹೆ ಪಡೆದು ಇವುಗಳಿಂದ ಹೊರ ಬರುತ್ತಾರೆ, ಕೆಲವರು ಯಾರ  ಬಳಿಯೂ ಇವುಗಳನ್ನು ಹೇಳಿಕೊಳ್ಳದೇ ಕೊರಗಿ ಕಷ್ಟ ಪಡುತ್ತಾರೆ ಇನ್ನೂ ಕೆಲವರು ನೀ ಇರದಿದ್ದರೆ " ಇನ್ನೊಬ್ಬಳು " ಅಂತ ಮತ್ತೊಂದು ಪ್ರಯತ್ನದಲ್ಲಿ ತೊಡಗುತ್ತಾರೆ.           

Conclusion 

" Arrange marriage is while ' u r walking, unfortunately a snake bites u'. But Love marriage is dancing in front of the Snake and saying Kadi ba...kadi ba...kadi ba.... :) :) :) "   
ನಿಮಗಾಗಿ.......
ನಿರಂಜನ್


ಮಂಗಳವಾರ, ಮಾರ್ಚ್ 8, 2011

"ವಿಶ್ವ ಕನ್ನಡ ಸಮ್ಮೇಳನ"

                   "ವಿಶ್ವ ಕನ್ನಡ ಸಮ್ಮೇಳನ" ವಿವಾದಗಳು ಬೇಕೆ ???

ನ್ನಡ ರಾಜ್ಯೋತ್ಸವ , ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವ ಕನ್ನಡ ಸಮ್ಮೇಳನಗಳು ಕನ್ನಡ ಭಾಷೆ ಹಾಗೂ ರಾಜ್ಯದ ಮೇಲಿರುವ ಗೌರವವನ್ನು ತೋರಿಸುವ, ಹಿರಿಮೆಯನ್ನು ಎತ್ತಿ ಹಿಡಿವ , ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಕನ್ನಡ ಸಂಸ್ಕೃತಿಯನ್ನು ಪ್ರಪಂಚಕ್ಕೆ ತೋರಿಸುವ ಹಬ್ಬಗಳಾಗ ಬೇಕೇ ಹೊರತು,ನಾವು ತಲೆ ತಗ್ಗಿಸುವಂತ ವಿವಾದಗಳನ್ನು ಸೃಷ್ಟಿಸಿ , ಇವುಗಳ ಜೊತೆ ರಾಜಕೀಯ ಮಾಡುವುದು ಅದೆಷ್ಟು ಸರಿ ?  ಇದಕ್ಕೆ ತಾಜಾ ಉದಾಹರಣೆಯೆಂದರೆ ಇನ್ನೂ ಕೆಲವೇ  ದಿನಗಳಲ್ಲಿ ಆರಂಭವಾಗಲಿರುವ  ಬೆಳಗಾವಿ " ವಿಶ್ವ ಕನ್ನಡ ಸಮ್ಮೇಳನ ". ಸಮ್ಮೇಳನದ ಉದ್ಘಾಟನೆ ಯಾರು ಮಾಡಬೇಕೆಂಬುದರ  ಬಗ್ಗೆ ಕೆಲವರು ಸೃಷ್ಟಿ ಮಾಡಿರುವ ವಿವಾದ ನಿಜಕ್ಕೂ ನಾವೆಲ್ಲರೂ ತಲೆ ತಗ್ಗಿಸಬೇಕಾದ ವಿಚಾರವೇ ಸರಿ.


          












       
             ಕೆಲವು ಜನರು ಅನಾವಶ್ಯಕವಾಗಿ ಇಂತಹ ವಿವಾದಗಳಿಗೆ ನಾಂದಿ ಹಾಡುತ್ತಾ ಮತ್ತು ಜನರನ್ನು ಪ್ರಚೋದಿಸುತ್ತಾ ತಮ್ಮ ತಮ್ಮ ಗೌರವಗಳನ್ನು ತಾವೇ ಕಡಿಮೆ ಮಾಡಿಕೊಳುತ್ತ, ಹಾದಿ ಬೀದಿಗಳಲ್ಲಿ, ಟೀವೀ ಮತ್ತು ಪತ್ರಿಕಾ ಮಾದ್ಯಮಗಳಲ್ಲಿ ತಮ್ಮ ಸಣ್ಣ ತನವನ್ನು ತಾವೇ ತೋರಪಡಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ವಿಶ್ವ ಕನ್ನಡ ಸಮ್ಮೇಳನ ಕೇವಲ ಕನ್ನಡ ಸಾಹಿತಿಗಳಿಗೆ,ಕವಿಗಳಿಗೆ ,ಚಲನ ಚಿತ್ರ ನಟರಿಗೆ ಹಾಗೂ ಕನ್ನಡ ಪರ ಹೋರಾಟಗಾರರಿಗೆ ಮಾತ್ರ ಅಲ್ಲ. ಇದು ಕರ್ನಾಟಕದ ಪ್ರತಿಯೊಬ್ಬ  ನಾಗರೀಕನಿಗೂ, ದೇಶ ವಿದೇಶದಲ್ಲಿರುವ ಪ್ರತಿಯೊಬ್ಬ ಕನ್ನಡಿಗನಿಗೂ  ಕೂಡ ಇದು ಒಂದು ಹಬ್ಬ. ಕನ್ನಡ ಕೇವಲ ಸಾಹಿತಿಗಳ,ಕವಿಗಳ ಹಾಗೂ ಹೋರಾಟಗಾರರ ಸ್ವಂತ ಆಸ್ತಿಯೂ ಅಲ್ಲ ಮತ್ತು ಅವರಿಗೆ ಮಾತ್ರ ಇದು ಸೀಮಿತವಲ್ಲ. ಇದು ಕರ್ನಾಟಕದ ಹೊರಗೆ ಮತ್ತು ಇಲ್ಲಿ  ಇರುವ ಪ್ರತಿಯೊಬ್ಬ ಸಾಮಾನ್ಯ ಕನ್ನಡಿಗನ ಆಸ್ತಿ. ಕನ್ನಡಕ್ಕೆ ದುಡಿಯುವುದೆಂದರೆ ಕನ್ನಡದಲ್ಲಿ ನಾಲ್ಕಾರು ಪುಸ್ತಕಗಳನ್ನು ಬರೆಯುವುದಲ್ಲ, ಕವನಗಳನ್ನು ಗೀಚುವುದಲ್ಲ ಹಾಗೂ ಗಂಟೆಗಟ್ಟಲೇ ಕನ್ನಡದ ಬಗ್ಗೆ ಭಾಷಣ ಮಾಡುವುದಲ್ಲ. ಕನ್ನಡ ಭಾಷೆಯನ್ನು ಮಾತನಾಡುತ್ತಾ, ಕನ್ನಡವನ್ನು ಗೌರವಿಸುತ್ತಾ  , ಕರ್ನಾಟಕದಲ್ಲಿ ದುಡಿಯುವ ಮತ್ತು ಜೀವಿಸುವ ಪ್ರತಿಯೊಬ್ಬರೂ ಕನ್ನಡಿಗರೇ. ಅದೇ ರೀತಿ ನಮ್ಮ ಹೆಮ್ಮೆಯ ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ, ಕವಿ ಅಥವಾ ಲೇಖಕರಾಗದೆ ಇರಬಹುದು, ಆದರೆ ಅವರು ಒಬ್ಬ ಕನ್ನಡಿಗ ಹಾಗೂ ಅದೇ ರೀತಿ ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳುವ ಅವರ ಹಕ್ಕನ್ನು ಯಾರು ಪ್ರಶ್ನಿಸುವಂತಿಲ್ಲ. ನೇರವಾಗಿ ಅವರು ಕನ್ನಡ ಭಾಷೆಗೆ ಯಾವುದೇ ಕೊಡುಗೆ ನೀಡದಿರಬಹುದು, ಕನ್ನಡ ಚಳುವಳಿಗಳಲ್ಲಿ ಭಾಗವಹಿಸದೇ ಇರಬಹುದು ಆದರೆ ಕರ್ನಾಟಕಕ್ಕೆ ಅವರದೇ ಆದ ಶೈಲಿಯಲ್ಲಿ ಅವರು ನೀಡಿರುವ ಕೊಡುಗೆಯನ್ನು ನಾವು ಮೆಚ್ಚಲೆ ಬೇಕು.ಅವರ ಕಾರ್ಯ ಕ್ಷೇತ್ರದಲ್ಲಿ  ಅವರ ಬುದ್ದಿ ಮಟ್ಟಕ್ಕೆ ಸರಿಯಾಗಿ ಅವರು ಕಾರ್ಯ ನಿರ್ವಹಿಸಿ , ಯಶಸ್ವಿ ಉದ್ಯಮಿಯಾಗಿ, ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ , ಪ್ರಪಂಚವೇ ನಮ್ಮ ದೇಶದ ಕಡೆಗೆ ನೋಡುವಂತೆ ಮಾಡಿದ, ದೇಶದ ಹೆಮ್ಮೆಯಾಗಿರುವ ಅವರು ಕನ್ನಡಿಗರೆಂದರೆ ನಮಗೂ ಹೆಮ್ಮೆಯ ಸಂಗತಿ ಅಲ್ಲವೇ. ಕರ್ನಾಟಕ ಸರಕಾರ ಮತ್ತು ಹಿರಿಯ ಅಧಿಕಾರಿ ವಿಠ್ಠಲಮೂರ್ತಿಯವರ  ಒತ್ತಾಯದ ಮೇರೆಗೆ ಸಮ್ಮೇಳನವನ್ನು ಉದ್ಘಾಟಿಸಲು ಒಪ್ಪಿಕೊಂಡ ನಾರಾಯಣಮೂರ್ತಿಯವರ  ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ ???.

                 ನಾರಾಯಣಮೂರ್ತಿಯವರ ಸಾಧನೆಗಳನ್ನು ಪ್ರಶ್ನಿಸುತ್ತಿರುವ ಬುದ್ದಿಜೀವಿಗಳಾದರೂ ನಮ್ಮ ನಾಡಿಗೆ ಕೊಟ್ಟಿರುವುದೇನು ?  ನಾರಾಯಣಮೂರ್ತಿಯವರನ್ನು ಬರಿ ಒಬ್ಬ ಉದ್ಯಮಿ ಮತ್ತು ಹಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಅವರು ತಾವು ಬರೆದ ಪುಸ್ತಕಗಳನ್ನೇನು ಉಚಿತವಾಗಿ ಜನರಿಗೆ ಕೊಡುತ್ತಿದ್ದಾರ ? ನಾರಾಯಣಮೂರ್ತಿಯವರನ್ನು ಮತ್ತೊಬ್ಬ ಉದ್ಯಮಿ ಮಲ್ಲ್ಯ ಜೊತೆ ಹೋಲಿಸುವುದು ಅದೆಷ್ಟು ಸರಿ ?. ಕನ್ನಡ ಹಬ್ಬಗಳು ಮೇಲೆ ಹೇಳಿದಂತೆ ಬರಿ ಸಾಹಿತಿ ಮತ್ತು ಕವಿಗಳಿಗೆ ಅಲ್ಲ ಮತ್ತು ಅವರ ಖಾಸಗಿ ಕಾರ್ಯಕ್ರಮಗಳು ಅಲ್ಲ. ಆದ್ದರಿಂದ ನಾರಾಯಣಮೂರ್ತಿಯವರು ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುವುದರಲ್ಲಿ ಯಾವ ತಪ್ಪು ಕಾಣಿಸುತ್ತಿಲ್ಲ ಮತ್ತು ಉದ್ಘಾಟಿಸುವ ಎಲ್ಲ ಹಕ್ಕು ಅವರಿಗಿದೆ. ಸರಕಾರ ಮತ್ತು ಸಮ್ಮೇಳನ ಸಮಿತಿಯು ನಾರಾಯಣಮೂರ್ತಿಯವರ ಪರವಾಗಿ ನಿಂತಿರುವುದು ಸರಿ ಎಂದು ನನ್ನ ಭಾವನೆ.

            ರಾಜ್ಯದ ನಾಯಕರು,ಹಿರಿಯರು ಮತ್ತು ನಾವುಗಳು ನಿಜವಾಗಿಯೂ ಭಾಷೆಯನ್ನು, ಕನ್ನಡಿಗರನ್ನು ಹಾಗೂ ಕರ್ನಾಟಕದ ಸಾದಕರನ್ನುಗೌರವಿಸದೇ ಇದ್ದರೆ ಮತ್ತ್ಯಾರೂ ನಮ್ಮನು ಗೌರವಿಸುತ್ತಾರೆ. ವಿವಾದಗಳಿಗೆ ಎಡೆಮಾಡಿಕೊಡದೇ , ಒಬ್ಬರನ್ನೊಬ್ಬರು ಗೌರವಿಸುತ್ತಾ, ಪ್ರೀತಿಸುತ್ತ ಹಬ್ಬಗಳನ್ನು ಅಥವಾ ಸಮ್ಮೇಳನಗಳನ್ನು ಆಚರಿಸಿದರೆ ಮಾತ್ರ ಸಾರ್ಥಕತೆ ದೊರೆಯುವುದೇ ಹೊರತು ವಿವಾದಗಳಿಂದ ಅಲ್ಲ.  

ನಿಮಗಾಗಿ.......
ನಿರಂಜನ್