ಶನಿವಾರ, ಆಗಸ್ಟ್ 31, 2013

ನುಡಿದ ವೀಣೆ

         ನುಡಿದ ವೀಣೆ 

ಬಿಳಿಯ ವಸ್ತ್ರವನುಟ್ಟು  ನೀ ಬರುತಿರೆ ....
ಮಲ್ಲಿಗೆಯನ್ನು ಧರಿಸಿದಂತೆ ಈ ಧರೆ ....

ನೊರೆಯಾಲಿನಂತಹ ನಿನ್ನ ಈ ಚಲುವ
ಮರೆಯುವುದಿಲ್ಲ ಚೆಲುವೆ ನಿನ್ನ ಒಲವ.... 

ಬೋರ್ಗರೆಯಲಿ ನಿನ್ನ  ಪ್ರೇಮದ ಅಲೆ..
ನುಡಿಯಲಿ  ವೀಣೆ ನನ್ನೆದೆಯ ಮೇಲೆ ...  

ಮನದ ತಾಳಕೆ ಶ್ರುತಿ ಇಡಿಯುವವಳು ನೀ
ಮನದ ಹಾಡಿಗೆ  ಸಾಹಿತ್ಯ ರೂಪಳೂ ನೀ....

ನೀ ನನಗುಣ್ಣೆಮೆಯ ಪೂರ್ಣ ಚಂದಿರ 
ಪ್ರತಿ ದಿನವೂ ಪೌರ್ಣಮಿಯಾಗಲೆಂದು,
ಬಯಸುವುದು ನನ್ನ ಈ ಪುಟ್ಟ ಹೃದಯ ....

ನಿಮಗಾಗಿ 
ನಿರಂಜನ್ 

ಗುರುವಾರ, ಆಗಸ್ಟ್ 29, 2013

ಸುಮ್ಮನಿರಲಿಲ್ಲವೇಕೆ...



   ಸುಮ್ಮನಿರಲಿಲ್ಲವೇಕೆ... 

ನ ಹೇಳಲಿ, ನಾ ಅದೆಷ್ಟು ಬಣ್ಣಿಸಲಿ
ಮನದಾಳದಲಿ ಬರೀ ನೀನೆ ಇರಲು...

ಪ್ರಿಯೆ, ನೋಡಿದಾಕ್ಷಣ ಸುಮ್ಮನ್ನಿರದೆ
ಸುಮ್ಮನಿದ್ದ  ಹೃದಯದಾಳಕ್ಕೆ  ಜಿಗಿದೆ 

ತಣ್ಣಗಿದ್ದ , ಭಾವನೆಗಳಿಗೆ ಬಣ್ಣವ ಹಚ್ಚಿ 
ಸಣ್ಣಗಿದ್ದ ಆಸೆಯನ್ನುಬ್ಬಿಸಿ ಹುಚ್ಚಚ್ಚಿಸಿದೆ

ಆಸೆಯ ಬಳ್ಳಿಯ ಬೇರು ಆಳಕ್ಕಿಳಿದಿರಲು
ಆಸರೆಯ ಬಯಸದೇ  ಜೊತೆಯಲಿರಲು

ನೀ ನಡೆದಾಗೆದ್ದೇಳುವ  ಗೆಜ್ಜೆಯ ತಾಳ  
ನೀ ನುಡಿದಾಗುರುಳುವ ಮುತ್ತಿನ ಮೇಳ
ಮೇಳವಿಸಿ ಕುಣಿಯದಿರುವುದೇ ನನ್ನ ಹೃದಯದಾಳ ....

ಮನದ ಕನಸಿನೋತ್ಸವದ ರಾಣಿ ನೀನೆ 
ನನ್ನ ಪ್ರೀತಿಯುತ್ಸಾಹದ ಸ್ಪೂರ್ತಿ ನೀನೆ

ಏನ ಹೇಳಲಿ, ನಾ ಅದೇಷ್ಟು ಬಣ್ಣಿಸಲಿ
ಮನದಾಳದಲಿ ಬರೀ ನೀನೆ ಇರಲು..............

ನಿಮಗಾಗಿ 
ನಿರಂಜನ್ 



ಶನಿವಾರ, ಆಗಸ್ಟ್ 17, 2013



ಸೋತ ಬಳ್ಳಿ , ನುಲಿದ ಮಳ್ಳಿ

ಮರುಕಳಿಸಿ ಮುಂಜಾವಿನಲಿ ಮುತ್ತಿದವು 
ಮರೆತ ಆ ನನ್ನ ಹಳೆಯ ನೆನಪುಗಳು

ಕ್ಷಣದಲ್ಲೇ  ಬಂದವು , ಬಿಗಿದಪ್ಪಿದವು
ಇಡಿದೆಳೆದಾಡಿದವು ನನ್ನ ಹಳೆಯ ನೆನಪುಗಳು

ಆಷಾಡದ ಗಾಳಿ, ತಂಪಾದ ನಿಸರ್ಗ
ಹಕ್ಕಿಗಳಿಂಚರ, ಧರೆಗಿಳಿದಂತಿತ್ತು ಸ್ವರ್ಗ

ನೀನರಿಯದೆ ನಗೆ ಬೀರಿ ನಿಂತಿದ್ದೆ ಅದರ ಬಳಿ  
ನಾಚಿ ನೀರಾಗಿತ್ತು ಕಂಡೊಡನೆ ಆ ಮಲ್ಲಿಗೆ ಬಳ್ಳಿ  

ನಿನ್ ನೋಟಕೆ , ನಿನ್ ಬಳುಕಿಗೆ  ಸೋತಿತ್ತು
ಇವಳೊಬ್ಬಳೆ ಎನಗೆ ಸರಿಸಾಟಿ ಎಂದೆನಿಸಿತ್ತು 

ನೀರ ಮುತ್ತ ಮಣಿಗಳುರುಳಿದವು ನಿನ್ಮೇಲೆ 
ತಾನೇ ಸುರಿಯಿತು ಸೋತು, ಬಳ್ಳಿ ಹೂಮಳೆ

ಉಳಿದ ಮೊಗ್ಗುಗಳೋ ಅರಳುವುವು ಇನ್ನೆಲ್ಲಿ  ?,
ಝೇಂಕರಿಸುವ ಸುಂದರ ದುಂಬಿಯಾಟವಿನ್ನೆಲ್ಲಿ  ?

ಸೋತಿತ್ತು ಅಲ್ಲಿ , ನಿನ್ ನೋಡಿದ ಮಲ್ಲಿಗೆ ಬಳ್ಳಿ , 
ನೀನೋ  ಅರಿಯದೆ , ಹಾಗೆ ಇದ್ದೆ ಬಲು ಮಳ್ಳಿ ..

ನಿಮಗಾಗಿ 
ನಿರಂಜನ್

ಬುಧವಾರ, ಆಗಸ್ಟ್ 14, 2013

ಸ್ವಾತಂತ್ರ್ಯದ ದಿನ .....

                                                  
                                                           ಸ್ವಾತಂತ್ರ್ಯದ  ದಿನ  ..... 
 
ಸ್ನೇಹಿತರೆ  ಮತ್ತೆ ಬಂದಿತು ಈ ದಿನ , ಸ್ವಾತಂತ್ರದ  ದಿನ , ನಮ್ಮೆಲ್ಲರನ್ನೂ ಬ್ರಿಟೀಷರ  ಕೈ ವಶದಿಂದ ಮುಕ್ಥವಾಗಿಸಿದ ದಿನ . ಇದೇ ದಿನಕ್ಕಲ್ಲವೇ ನಾವೆಲ್ಲರೂ ಕಾದದ್ದು ಅದೆಷ್ಟೋ ದಿನ. ಹಗಲಿರುಳೆನ್ನದೆ , ಮೇಲು ಕೀಳೆನ್ನದೆ, ಹಿರಿಯ-ಕಿರಿಯರೆನ್ನದೆ, ಗಂಡು ಹೆಣ್ಣೆನ್ನದೆ ತ್ಯಾಗಬಲಿದಾನ ಮಾಡಿದ ಆ ಮಾಹಾತ್ಮರನ್ನು ನೆನೆಯುವ ಸುದಿನ. ದೇಶಕ್ಕಾಗಿ ದುಡಿಯುವ , ಪ್ರಾಮಾಣಿಕವಾಗಿ ದೇಶದ ಹಿತಕ್ಕಾಗಿ ಚಿಂತಿಸುವ ದಿನ , ಒಗ್ಗಟ್ಟಾಗಿ ನಾವೆಲ್ಲರೂ ಮುಂದಿನ ಭಾರತಕ್ಕೆ ಏನು ಕೊಡುತ್ತೇವೆ ಎಂಬುದರ ಬಗ್ಗೆ ಯೋಚಿಸುವ  ದಿನ. 
 
                ಈ ದಿನ ಬರೀ ಕೇವಲ  ದ್ವಜ ಹಾರಿಸಿ, ಸಿಹಿ ಹಂಚಿ , ರಜ ಕಳೆಯುವುದಕ್ಕೆ ಮಾತ್ರ ಸೀಮಿತವಾಗಿರದೆ , ನಮ್ಮ ದೇಶದ ಇತಿಹಾಸವನ್ನು  ತಿಳಿಯುವ, ಯುವ ಜನತೆಯಲ್ಲಿ ದೇಶಪ್ರೇಮ ಮೂಡಿಸುವ , ನಾಡಿನ ಅಭಿವೃದ್ದಿಗೆ ಶ್ರಮಿಸಿದ , ಈಗಲೂ ಶ್ರಮಿಸುತ್ತಿರುವ ಪುಣ್ಯ ಪುರುಷರ ಬಗ್ಗೆ ತಿಳಿದಿಕೊಳ್ಳುವ ದಿನವಾಗುವುದರ ಜೊತೆಗೆ ಅಂಥಹ ಮಹನೀಯರಿಗೆ  ಅಭಿನಂದನೆ , ಗೌರವ  ಸಲ್ಲಿಸುವ ದಿನವಾಗಬೇಕು. ನಾವೆಲ್ಲರೂ ಚಿಕ್ಕ ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸುವ ಕೆಲಸದಲ್ಲಿ ಪಾಲ್ಗೊಳ್ಳಬೇಕು , ದೇಶದ ಯುವ ಜನತೆಗೆ ನಮ್ಮ ದೇಶದ ಇತಿಹಾಸದ ಬಗ್ಗೆ , ನಮ್ಮವರು  ನಮ್ಮ ದೇಶಕ್ಕೆ ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ಅರಿವು ಮೂಡಿಸಿ , ಜಾಗೃಥರನ್ನಾಗಿಸಬೇಕು.  ಸದೃಡ ದೇಶ ಕಟ್ಟಲು ನಮ್ಮದೇ ಆದ ರೀತಿಯಲ್ಲಿ ನಾವು ದುಡಿಯಲು ಭಾರತಾಂಬೆಯ ಹೆಸರಲ್ಲಿ ಪ್ರತಿಜ್ಞೆ ಮಾಡಿ, ಆ ದಿಸೆಯಲ್ಲಿ ಕಾರ್ಯಮಗ್ನರಾಗಬೇಕು. 
 
 
 
              ಸ್ನೇಹಿತರೆ ,  ಈಗಿನ ಸದ್ಯದ ಪರಿಸ್ಥಿತಿಯಲ್ಲಿನಾವು ನಮ್ಮ ದೇಶದ ಬಗ್ಗೆ ಇನ್ನೂ ಹೆಚ್ಚಿನ ಖಾಳಜಿ  ವಹಿಸಬೇಕಾಗಿದೆ. ದೇಶದ ಹಾಗು-ಹೋಗುಗಳ ಬಗ್ಗೆ ಜಾಗೃತರಾಗಬೇಕಾಗಿದೆ.  ರಾಜಕೀಯ ದೊಂಬರಾಟಗಳು , ದೇಶದ ಗಡಿಯಲ್ಲಾಗುತ್ತಿರುವ ಪ್ರಸಕ್ತ ಬೆಳವಣಿಗೆಗಳು, ನಮ್ಮ ದೇಶದ ಕಿರೀಟಪ್ರಾಯವಾದ ಕಾಶ್ಮೀರದಲ್ಲಿ ನಡೆಯುತ್ತಿರುವ ಕೋಮುಗಲಬೆ , ಸದ್ಯದ ಆರ್ಥಿಕ ಸಂಕಷ್ಟಗಳು, ರಾಜ್ಯ-ರಾಜ್ಯಗಳ  ನಡುವಿನ ಅಂತಃ ಕಲಹಗಳು , ಆಂದ್ರದಲ್ಲಿರುವ  ಪ್ರಕ್ಷುಬ್ದ  ವಾತಾವರಣ ನಮಗೆಲ್ಲ ನಿದ್ದೆಗೆಡಿಸಿವೆ ನಿಜ. ಆದರೆ ಅದಕ್ಕೆಲ್ಲ ಪರಿಹಾರವು ಕೂಡ ಇದ್ದೆ ಇದೆ. ಈ ಎಲ್ಲಾ  ಸಮಸ್ಯಗಳ ಪರಿಹಾರಕ್ಕೆ ಸೂತ್ರಗಳು ದೇಶದ ಎಲ್ಲ ಪ್ರಜೆಯ ಕೈಯಲ್ಲೂ ಇವೆ. ಹಾಗಾಗಿ ನಾವು ಸರಿಯಾಗಿ ಚಿಂತಿಸಿ ಯಾವುದು ಸರಿ ಯಾವುದು ತಪ್ಪು , ನಮ್ಮ ದೇಶದ ಪ್ರಗತಿಯಲ್ಲಿ ನಾವು ನಮ್ಮನ್ನು ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ಅರಿತು ಪ್ರತಿಯೊಬ್ಬರು ದೇಶವನ್ನು ಕಟ್ಟುವುದರಲ್ಲಿ , ದೇಶದ ಏಳಿಗೆಯ ಮಹಾನ್ ಕಾರ್ಯಕ್ರಮದಲ್ಲಿ  ಹಿಂಜರಿಯದೆ  ಪಾಲ್ಗೊಳ್ಳಬೇಕಾಗಿದೆ. ಪ್ರತಿಯೂಬ್ಬ ಪ್ರಜ್ಞಾವಂತ ಪ್ರಜೆಯು ಕೂಡ ತನ್ನದೇ ರೀತಿಯಲ್ಲಿ ತಾನು ಈ ಮಹತ್ವದ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು ಹಾಗು ಇದಕ್ಕೆ ಅನೇಕ ದಾರಿಗಳೂ ಕೂಡ ಇವೆ. 
 
              ಜನರಲ್ಲಿ ದೇಶದ ಸದ್ಯದ ಬೆಳವಣಿಗೆಗಳ  ಬಗ್ಗೆ  ಜಾಗೃತಿ ಮೂಡಿಸುವುದು, ಬ್ರಷ್ಟಚಾರದ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಕ್ಕೆ ಸ್ವಲ್ಪವೂ ವಂಚಿಸದೆ ಸರಿಯಾದ ರೀತಿಯಲ್ಲಿ TAX ಕಟ್ಟುವುದು , ಚಿಕ್ಕ ಮಕ್ಕಳಲ್ಲಿ ದೇಶದ ಬಗ್ಗೆ ಅಭಿಮಾನ ಮೂಡಿಸುವುದು , ದೇಶದ ಗಡಿ ರಕ್ಷಣೆಯಲ್ಲಿರುವ ವೀರ ಯೋದರ ಕುಟುಂಬಗಳಿಗೆ ಸಹಾಯ ಹಸ್ತ ನೀಡುವುದು, ಪ್ರಜಾಪ್ರಭುತ್ವದಲ್ಲಿ ನಮ್ಮೆಲ್ಲರ ಹಕ್ಕಾದ ಮತದಾನವನ್ನು ತಪ್ಪಿಸದಂತೆ ಮಾಡುವುದು , ಇನ್ನು ಅನೇಕ ಕೆಲಸಗಳನ್ನು ನಾವು ತಪ್ಪದೆ ಮಾಡಬೇಕಾಗಿದೆ.   ದೇಶದ ಮೂಲಭೂತ  ಸಮಸ್ಯೆಗಳಾದ ಪರಿಸರ ಮಾಲಿನ್ಯದ ಕಡೆ  ವಿಶೇಷ ಗಮನ ಹರಿಸಿ, ನಮ್ಮ  ನದಿ, ಕೆರೆ , ಕಾಡುಗಳ  ಉಳಿವಿಗಾಗಿ ಹೋರಾಡಬೇಕಾಗಿದೆ .  ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ  , ಸರ್ಕಾರದ ಗಮನೆ ಸೆಳೆಯಬಕಾಗಿದೆ .  ಆಡಳಿತ  ಯಂತ್ರವನ್ನು ಮುನ್ನೆಡೆಸುತ್ತಿರುವ ಕೆಲ ಬ್ರಷ್ಟ ರಾಜಕಾರಣಿಗಳನ್ನು ಕಿತ್ತೊಗೆದು ಒಳ್ಳೆಯ , ಸಜ್ಜನ , ದೇಶದ ಬಗ್ಗೆ ಖಾಳಜಿ ಇರುವ , ದೇಶದ ಎಲ್ಲ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು , ನಮ್ಮ ದೇಶವನ್ನು ಅಭಿವೃದ್ದಿಯ  ಪಥದಲ್ಲಿ ಸಾಗಿಸುವ  ಇಚ್ಚಾಶಕ್ತಿ ಇರುವ ನಾಯಕರನು ಚುನಾಯಿಸಬೇಕಾಗಿದೆ. 
 
              ಇವೆಲ್ಲದರ ಜೊತೆಗೆ ನಮ್ಮ ದೇಶದಲ್ಲಿ ಇರುವ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ಭಾಷೆ , ಜಾತಿ , ಹಣಗಳಿಂದ  ನಮ್ಮಲ್ಲಿ ಉಂಟಾಗಿರುವ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಅಂತರವನ್ನು  ಬಡಿದೊಡಿಸಲು  ಸನ್ನದ್ದರಾಗಬೇಕು.  ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿ ಗೌರವಗಳಿಂದ ಕಾಣಬೇಕು. ನಿರಂತರವಾಗಿ ಜಾತಿ, ಭಾಷೆ,  ಧರ್ಮಗಳ ಆಧಾರದ ಮೇಲೆ ನಮ್ಮನ್ನು ನಮ್ಮ ನಮ್ಮ ನಡುವಿನ ಅಂತರವನ್ನು ಹೆಚ್ಚು ಮಾಡುತ್ತಿರುವ ಅಜ್ಞಾನಿಗಳ ವಿರುದ್ದ ದ್ವನಿಯೆತ್ತಿ , ಪ್ರೀತಿಯ ಚಿಲುಮೆಯುಕ್ಕುವಂತೆ ಮಾಡಬೇಕು.  ನಮ್ಮ ಮುಂದಿನ ಪೀಳಿಗೆಗೆ  ನಾವೆಲ್ಲರೂ ಒಳ್ಳೆಯ ಉದಾಹರಣೆಗಾಳಗಬೇಕು ,  ವಿಜ್ಞಾನ , ತಂತ್ರಜ್ಞಾನ,ಆರೋಗ್ಯ ಕ್ಷೇತ್ರದಲ್ಲಿ ನಾವು ಸ್ವಯಂ ಸೇವಕರಂತೆ ದುಡಿಯಬೇಕು. ಒಳ್ಳೆಯ ದೇಶವನ್ನು ನಾವು  ನಮ್ಮ  ಮುಂದಿನ ಪೀಳಿಗೆಗೆ ನೀಡಬೇಕು.  ಈ ಎಲ್ಲ ಕಾರ್ಯ ಕ್ರಮಕ್ಕೂ ನಾವು ನಮ್ಮದೆಲ್ಲವನ್ನು ಅರ್ಪಿಸಿ , ದೇಶದ ಪ್ರಗತಿಗೆ ನಮ್ಮದೇ ಆದ ರೀತಿಯಲ್ಲಿ ಶ್ರಮಿಸಬೇಕು.  
 
ಮೇಲಿನ ಎಲ್ಲ ವಿಷಯಗಳ ಬಗ್ಗೆ ನಾವು ಗಮನ ಹರಿಸುವ , ದೇಶದ ಪ್ರಗತಿಗೆ ನಮ್ಮ ಕೈಲಾದ ಸೇವೆಯನ್ನು ನಾವು ಮಾಡೋಣವೆಂದು  ಪ್ರತಿಜ್ಞೆ ಮಾಡುತ್ತಾ , ಎಲ್ಲರಿಗು ನನ್ನ ಸ್ವಾತಂತ್ರ ದಿನದ ಶುಭಾಷಯಗಳನ್ನು  ಕೋರುತ್ತ ನನ್ನ ಈ ಲೇಖನಕ್ಕೆ ವಿರಾಮ ಹಾಕುತ್ತಿದ್ದೇನೆ. 
 
ನಿಮಗಾಗಿ 
ನಿರಂಜನ್