ಗುರುವಾರ, ಜುಲೈ 29, 2010

Poly-tical Jaatre !!!!

ಸ್ನೇಹಿತರೆ ,

ಈ ದಿನ ನನಗೆ ಯಾಕೋ ತುಂಬಾ ಗಾಂಧೀಜಿಯವರು ನೆನಪು ಆಗುತ್ತ ಇದ್ದಾರೆ, ಅವರು ಇಲ್ಲಿ ಇದ್ದಿದ್ದರೆ ಅವರ ಪರೀಸ್ತಿತಿ ಹೇಗಿರುತೀತ್ತೋ ಎನ್ನುವ ಪ್ರೆಶ್ನೆ ಕಾಡತೊಡಗಿದೆ, ಅದಕ್ಕೆ ಪ್ರಮುಕ ಕಾರಣವೆಂದರೆ, ನಮ್ಮ ರಾಜಕೀಯ ನಾಯಕರ ನಮ್ಮ ( ಅವರ ) ಒಳಿತಿಗಾಗಿ ಮಾಡುತ್ತಿರುವ ಸೇಡಿನ ಬೆಂಗಳೂರು-ಬಳ್ಳಾರಿ ಪಾದಯಾತ್ರೆ ! ! ! ಅದು ಪಾದಯಾತ್ರೆಯೋ ಅಥವಾ ಮೋಜಿನ ಜಾತ್ರೆಯೊ ! ! !, ಮಾಡುವವರಿಗೆ ಗೊತ್ತು ಮತ್ತು ನೋಡಿದವರಿಗೆ ಗೊತ್ತು !!. ಗಾಂಧೀಜಿಯವರು ಈಗ ನಮ್ಮೊಟ್ಟಿಗೆ ಇದ್ದು, ಟೀವೀ9 ನೋಡಿದ್ದರೆ ಅವರಿಗೆ ಎನಾಗುತ್ತಿತ್ತೊ,ಎಷ್ಟು ನೊಂದಿರುತ್ತಿದ್ದರೋ,ನನಗೆ ಗೊತ್ತಿಲ ಮತ್ತು ಊಯಿಸಲು ಸಾದ್ಯವಿಲ್ಲ . ಈಗಿನ ನಮ್ಮ ರಾಜಕೀಯ ನಾಯಕರ ಪಾದಯಾತ್ರೆ ನಿಜವಾಗಿಯೂ ಒಂದು ದೊಂಬರಾಟದಂತೆ ಇದೆ ಹಾಗೂ ಏಗಾಗಲೇ ಒಬ್ಬ ಮನುಷ್ಯನ ಜೀವವನ್ನು ತೆಗೆದುಕೊಂಡಿದೆ. ಮಹಾತ್ಮ ಗಾಂಧಿಯವರು 1930 ರಲ್ಲಿ ಅಹಮದಾಬಾದ್ನಿಂದ ದಂಡಿಯವರೆಗೆ ಉಪ್ಪಿನ ಸತ್ಯಾಗ್ರಾದ ಬಾಗವಾಗಿ ಪಾದಯಾತ್ರೆಯನ್ನು ಮಾಡಿದ್ದರು.ಆಗ ಅವರು ದಾರಿಯಲ್ಲಿ ಕಾಲ್ನೆಡಿಗೆಯಲ್ಲಿ ಸಾಗುವಾಗ ಆ ಆ ಭಾಗದ ಜನರ ಕಷ್ಟ ಮತ್ತು ಜೀವನದ ಕೊರತೆಗಳನ್ನು ಮತ್ತು ಸಮಸ್ಯೆಗಳನ್ನು ಅರಿತು , ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನ ನೆಡೆಸಿದ್ದರು, ಅದಕ್ಕೆ ವಿರೋದವೆಂಬಂತೆ ಈ ದಿನ ನಮ್ಮ ಕೆಲವು ರಾಜಕೀಯ ಮುಖಂಡರು ಬೆಂಗಳೂರಿನಿಂದ-ಬಳ್ಳಾರಿಯವರೆಗೆ ಪಾದಯಾತ್ರೆ ಮಾಡುತ್ತಾ, ಅದರ ಜೊತೆಗೆ ಕುಣಿದು ಕುಪ್ಪಳಿಸುತ್ತಾ ,ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ನೆಡೆಸುತ್ತಾ , ಬಗೆ ಬಗೆಯ ಭಕ್ಷ್ಯಗಳನ್ನು ಸವಿಯುತ್ತಾ, ಕೂಗಾಟ ಮತ್ತು ಚೀರಾಟಗಳೊಂದಿಗೆ ಪಾದಾಯಾತ್ರೆಯ ಉದ್ದೇಶವನ್ನು ಮರೆತಿದ್ದಾರೆ. ಅವರೊಟ್ಟಿಗೆ ಅವರ ಅನುಯಾಯಿಗಳು ಕೂಡ ಆಟೋಟಗಳಲ್ಲಿ ಬಾಗವಹಿಸಿ ಅದೇನೋ ಒಂದು ರೀತಿಯ ಮಧುವೆಯ ದಿಬ್ಬನದಂತೆ ಸಾಗಿದೆ ಈ ಸೇಡಿನ ಪಾದಾಯಾತ್ರೆ. ಅಲ್ಲಿ ಬಳ್ಳಾರಿಯಲ್ಲೊಬ್ಬ ಅತ್ಯಂತ ಪ್ರಭಾವಿ ನಾಯಕ ತನ್ನ ತಲೆ ಬೋಳಿಸಿಕೊಂಡು ಪ್ರೆಸ್ ಮೀಟ್ ಕೂಡ ಮಾಡಿದ್ದಾರೆ ( ನಿಜ ಅಂದರೆ ಅವರಿಗೆ ತಲೆ ಕೂದಲೆ ಇರಲಿಲ್ಲ ! ! ! ) . ಅಲ್ಲಿಗೆ ಅನೇಕ ಪತ್ರಕರ್ತರು ಕೂಡ ಹೋಗಿ ಅದರ ಬಗ್ಗೇನೂ ಲೇಖನಗಳನ್ನು ತಮ್ಮ ಪತ್ರಿಕೆಗಳ ಮೊದಲ ಪುಟದಲ್ಲಿ ಬರೆದಿರುವುದು ನಗೆಪಾಟಲಾಗೀಡು ಮಾಡಿದೆ. ಸ್ವಾಮಿ ನಿಮ್ಮ ತಲೆ ಕೂದಲನ್ನು ತಗೆಯುವುದರಿಂದ ಅಲ್ಲಿಯ ಸಮಸ್ಯೆ ಪರಿಹಾರವಾಗುವುದಿಲ್ಲ ದೇಶದ ಸಂಪನ್ಮೂಲಗಳನ್ನು ರಕ್ಷಿಸುವುದರಿಂದ,ಜನರ ಹಿತ ಕಾಪಾಡುವುದರಿಂದ ನೀವು ನಮಗೆ ಒಳ್ಳೆಯದನ್ನು ಮಾಡಬಹುದೇ ವಿನಹ ಇದ್ದ ಎರಡು ಕೂದಲನ್ನು ತಗೆದರೆ ಏನು ಆಗದು . ಇದರ ಬದಲು ನಾಯಕರು, ಜನರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಪರಿಹರಿಸಿದ್ದರೆ, ನಮ್ಮ ನಾಡಿನ ಪರಿಸ್ತಿತಿ ಹೀಗೆ ಇರುತ್ತಿರಲಿಲ್ಲ. ಇನ್ನಾದರೂ ನಮ್ಮ ನಾಯಕರು ಮತ್ತೆ ನಾವು ಬುಡ್ಡಿ ಕಲಿಯಬೇಕಾಗಿದೆ.ಪತ್ರಿಕೆಗಳು ಹಾಗೂ ಮಾದ್ಯಮಗಳು ಇಂತಹ ದೊಂಬರಾಟಗಳಿಗೆ ಹೆಚ್ಚಿನ ಮಹತ್ವಕೊಡದೆ, ನಿಜವಾದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಾಬೇಕಾಗಿದೆ. We should understand this and have to be carefull in elections !!!!!

ನಿಮಗಾಗಿ,
ನಿರಂಜನ ಮೂರ್ತಿ ಏಚ್ . ಓ

3 ಕಾಮೆಂಟ್‌ಗಳು:

  1. Good one..
    All this political game because of jealousy and improve the vote bank. Everyone will do the same when they are into ruling government. All politicians are same..

    ಪ್ರತ್ಯುತ್ತರಅಳಿಸಿ
  2. Its the routine with every group of political parties.Such disgusting rally from group of people in any party brings bad impressions to entire party.Every party is lead by good leaders who have right vision about country growth.Its about media which should behave maturely to decide whether to forecast such nasty rallies or not otherwise it spreads wrong information to ordinary peoples.Moreover these rallies are 100/200/300/400.... Rs paid per member rallies with biriyani,drinks & etc etc.So being responsible citizen someone should think whether he wants few bucks immediately or he wants good life in long term.
    lets hope people understands what is right & wrong and cast their valuable votes to right leaders.

    -Yogesh

    ಪ್ರತ್ಯುತ್ತರಅಳಿಸಿ