ಸೋಮವಾರ, ಜುಲೈ 20, 2015

Dairy Farm Story ..........


ನನ್ನ ಕನಸನ್ನು ನಾ ಬೆನ್ನುಹತ್ತಿ .....

ನಗೆ  ಅನ್ನಿಸಿದ್ದನ್ನು ಮಾಡಬೇಕು, ನನ್ನ ಇಷ್ಟದಂತೆ ನಾನು ಜೀವಿಸಬೇಕು ಎನ್ನುವ ಹಂಬಲ ಯಾರಿಗೆ ತಾನೇ ಇರುವುದಿಲ್ಲ. ಈ ರೀತಿಯ ಹಂಬಲವೇನೋ ಎಲ್ಲರಿಗೂ ಇದ್ದೆ ಇರುತ್ತದೆ. ಸದ್ಯಕ್ಕೆ ಆ ತರಹದ ಹುಚ್ಚು ಕನಸುಗಳು ನಮಗೆ ಇಲ್ಲವಾದಲ್ಲಿ, ಮೊಂದೊಂದು ದಿನ ಅವೇ ಕನಸುಗಳು ತಾವಾಗಿಯೇ ನಮ್ಮನ್ನು ಬೆನ್ನುಹತ್ತಿ ಬಂದೆ ಬರುತ್ತವೆ. ಕನಸುಗಳು ಕೆಲವರಿಗೆ ಸ್ವಲ್ಪ ಜಲ್ದಿ, ಮತ್ತೆ ಕೆಲವರಿಗೆ ಸ್ವಲ್ಪ ತಡವಾಗಿ ಬೆನ್ನುಹತ್ತುತ್ತವೆ. 

               ಕನಸುಗಳನ್ನು ಸಾಕಾರಗೊಳಿಸಲು ನಮಗೆ ನೂರೆಂಟು ದಾರಿಗಳು ಇರುತ್ತವೆ, ಅದೇ ರೀತಿಯಾಗಿ ನೊರೆಂಟು ಅಡೆತಡೆಗಳು ಕೂಡ ಬರುತ್ತವೆ. ಕನಸಿನ ಆಸೆಯ ಬಗ್ಗೆ ರಿವಿದ್ದರೂ ಕೂಡ, ಆಸೆಯ ದಿಸೆಯಲ್ಲಿ ಸಾಗಲು ನಾವು ಅನೇಕ  ಬಾರಿ ಕೇವಲ ಯೋಚಿಸಿ ಕಾರ್ಯ ಪ್ರವೃತ್ತರಾಗಲು ಮಾತ್ರ ವಿಫಲವಾಗುತ್ತೇವೆ. ಇಚ್ಚಾಶಕ್ತಿಯ ಕೊರತೆ, ಸೋಲಿನ ಭಯ, ಸಾಮಾಜಿಕ ಹಾಗು ಕೌಟಂಬಿಕ ಒತ್ತಡಗಳು, ಸಮಾಜದ ಪ್ರತಿಕ್ರಿಯೆ, ಲಾಭ-ನಷ್ಟಗಳ ತುಲನೆ , ಇನ್ನು ಅನೇಕ ಋಣಾತ್ಮಕ  ಅಂಶಗಳು ನಮ್ಮ ಕನಸುಗಳನ್ನು  ಬೆನ್ನು ಹತ್ತಲು ಬಿಡುವುದಿಲ್ಲ. ಆದರೆ  ಇವೆಲ್ಲವನ್ನೂ ಲೆಕ್ಕಿಸದೆ , ಇವುಗಳನ್ನು ಮೀರಿ ನಡೆಯುವವ  ಮಾತ್ರ ತನ್ನ ಕನಸುಗಳನ್ನ ನನಸಾಗಿಸಿಕೊಳ್ಳುತ್ತಾನೆ. ಅಂತವರು ಮಾತ್ರ ಜೀವನದಲ್ಲಿ ಸಾರ್ತಕಭಾವವನ್ನು  ಒಂದಲ್ಲ ಒಂದು ದಿನ ಕಂಡೇ ಕಾಣುತ್ತಾರೆ.

              ಕೆಲವರಿಗೆ ವೃತ್ತಿಯಲ್ಲಿ ಏನೋ ಸಾದಿಸಬೇಕು ಎನ್ನುವ ಕನಸು, ಮತ್ತೆ ಕೆಲವರಿಗೆ ಪ್ರವೃತ್ತಿಯಲ್ಲಿ ಏನಾದರು ಸಾದಿಸುವ ಕನಸು.  ನಿಜವಾದ ಕನಸನ್ನು ಬೆನ್ನು ಹತ್ತುವವರಿಗೆ ಲಾಭ ನಷ್ಟಗಳ ಪರಿವೇ ಇರುವುದಿಲ್ಲ , ಇರಲು ಕೂಡದು. ಕಂಡ ಕನಸನ್ನು ಸಾಕಾರಗೊಳಿಸುವ ಆ ಹಾದಿಯಲ್ಲಿ ನಮಗೆ ಸಿಗುವ ಸಾರ್ಥಕತೆಯ ಭಾವ ಹಾಗು ನೆಮ್ಮದಿ ಮತ್ಯಾವ ಕೆಲಸದಲ್ಲೂ ನಾವು ಅನುಭವಿಸಲು ಸಾದ್ಯವಿಲ್ಲ.

             ಅದೇ ರೀತಿಯ ಆಸೆ ಹಾಗು ಕನಸು ಮೊದಲಿಂದಲೂ ಕೂಡ ನನಗೂ ಒಂದು ಇದೆ. ನನ್ನ ಬಹುಪಾಲು ಬಾಲ್ಯವನ್ನು  ಗ್ರಾಮೀಣ ಪ್ರದೇಶದಲ್ಲೇ ಕಳೆದ ನನಗೆ ನನ್ನ ಬೇರುಗಳು ಮಾತ್ರ ಇನ್ನು ಅಲ್ಲಿಯೇ ಇವೆ. ಹಳ್ಳಿಗಾಡಿನಲ್ಲಿಯೇ ಏನಾದರು ಮಾಡಬೇಕೆನ್ನುವ ಹಂಬಲ ಕೂಡ ನನಗಿದೆ. ದನಕರುಗಳ ಮೇಲಿನ ಪ್ರೀತಿ, ಏನಾದರು ವಿಬಿನ್ನವಾದ ಕೆಲಸವನ್ನು ಮಾಡುಬೇಕೆನ್ನುವ ಹಂಬಲದಿಂದ ನಾನು ಹೈನುಗಾರಿಕೆಯನ್ನು ನನ್ನ ಮತ್ತೊಂದು ಪ್ರವೃತ್ತಿಯನ್ನಾಗಿಸಿ ಪ್ರಾರಂಬಿಸಿದ್ದೇನೆ. ಇದೇ ಹೈನುಗಾರಿಕೆಯಲ್ಲಿ ಯಶಸ್ಸು ಕಾಣುವ ಕನಸನ್ನು ನಾನು ಸದ್ಯಕ್ಕೆ ಬೆನ್ನುಹತ್ತಿರುವೆ. ಹೈನುಗಾರಿಕೆಯನ್ನು ಪ್ರವೃತ್ತಿಯಾಗಿ ನಾನು ಪ್ರಾರಂಭ ಮಾಡಬೇಕು ಎಂದಾಗ  ನನ್ನ ಹೆಂಡತಿ, ನನ್ನ ಸಹೋದರ-ಸ್ನೇಹಿತರು ಹುಬ್ಬೇರಿಸಿದ್ದರು. "Mtech ಊದಿ ದನ ಕಾಯ್ತಾನೆ ಅಂತೆ" ಅಂತಾನು ಕೆಲವರು ಅಂದ್ರು. ಆದರು ಏನೋ ಒಂದು ಕೆಟ್ಟ ಹಟದಿಂದ ಮುನ್ನುಗ್ಗಿ ಅವರೆಲ್ಲರನ್ನು ಒಪ್ಪಿಸಿದೆ. ಇವರೆಲ್ಲರನ್ನು ಒಪ್ಪಿಸಿದ್ದೆ ನನ್ನ ಮೊದಲ ಸಾದನೆ. ಮೊದಲು ನನ್ನ ಹೆಂಡತಿ ಶೋಭಾ ಒಪ್ಪಿದಳು, ನಂತರ ನನ್ನ ಸಹೋದರ ಸುರೇಶ, ನಂತರ ತಮ್ಮ ಮೇಘ. ಹೀಗೆ ನನ್ನ ಪ್ರವೃತ್ತಿಯನ್ನು ಸಾಕಾರಗೊಳಿಸುವ ಹಾದಿಯಲ್ಲಿ ಎಲ್ಲರು ಒಟ್ಟಾಗಿ ನಡೆಯುತ್ತಿದ್ದೇವೆ.ಇವರೆಲ್ಲರ ಪರಿಶ್ರಮದಿಂದಲೇ ಕಳೆದ ತಿಂಗಳಿಂದ ನಮ್ಮ ಡೈರಿಫಾರ್ಮ್ ನಮ್ಮ ಹುಟ್ಟೂರಿನಲ್ಲಿ ಶುಭಾರಂಭಗೊಂಡಿದೆ. ವೈಜ್ಞಾನಿಕ ಅಂಶಗಳ ಅಳವಡಿಕೆಸಿಕೊಂಡು ಒಂದು ಮಾಧರಿ ಡೈರಿ ಫಾರ್ಮ ಮಾಡುವ ಉದ್ದೇಶ ನಮ್ಮದು. ನನ್ನ ಕನಸಿನ ಒಂದು ಹಂತವಂತೂ ಈಗ ಸಾಕಾರಗೊಂಡಿದೆ. ಆಸೆಯೊಂದಿದ್ದರೆ ಎಲ್ಲವನ್ನು ನಾವು ಮಾಡಿಯೇ ಮಾಡುತ್ತೇವೆ ಎಂಬುದು ನನಗೊಂತು ಸದ್ಯಕ್ಕೆ ಅರಿವಾಗಿದೆ.  


            ಪೇಟೆಯ ಜೀವನ, ಸಾಫ್ಟ್ವೇರ್ ವೃತ್ತಿ , ನೆಮ್ಮದಿ ಕೊಡದ ಸುಳ್ಳು ಸಡಗರದ ಜೀವನ ಶೈಲಿ, ಇನ್ನು ಅನೇಕ ಅಂಶಗಳು ಮೊಂದೊಂದು ದಿನ ನನಗೆ  ಸಾಕಪ್ಪ ಸಾಕು ಎನ್ನಿಸುವುದು ನಿಶ್ಚಿತ. ಆ ಸಮಯದಲ್ಲಿ ನಾನು ಫುಲ್ ಟೈಮ್ ದನಕಾಯುವ ಕೆಲಸ ಮಾಡಿಕೊಂಡಿರಬೇಕು ಎನ್ನುವುದೇ ನನ್ನ ಆಸೆ. ನಾನು ನನ್ನ ಹೊಲದಲ್ಲಿ ದನಕಾಯುವಾಗ ನನ್ನ ಹೆಂಡತಿ ನನಗೆ ಮಧ್ಯಾನದ ಊಟಕ್ಕೆ ರೊಟ್ಟಿ-ಬುತ್ತಿ ತಂದೆ ತರುತ್ತಾಳೆ ಎನ್ನುವುದು ನನ್ನ ಮತ್ತೊಂದು ಕನಸು.

ನಿಮಗಾಗಿ 
ನಿರಂಜನ್  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ